ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಾಗಿ ಅವರ ಕರ್ತವ್ಯ ಅವರು ಮಾಡಿದ್ದಾರೆ. ಸಾಮಾನ್ಯ ಜನರು, ಸೆಲೆಬ್ರಿಟಿಗಳು ಎಂದು ನೋಡದೆ ಎಲ್ಲರನ್ನೂ ಅವರು ಸೆಕ್ಯೂರಿಟಿ ಉದ್ದೇಶಕ್ಕಾಗಿ ಎಲ್ಲರನ್ನೂ ಇದೇ ರೀತಿ ಪರಿಶೀಲನೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.ತಮಿಳು ನಟ ಸಿದ್ದಾರ್ಥ್ ತೆಲುಗು, ಹಿಂದಿ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ಸಿದ್ದಾರ್ಥ್ ಈಗ ಸಿಆರ್ಪಿಎಫ್ ಯೋಧರ ಮೇಲೆ ಒಂದು ಆರೋಪ ಮಾಡಿದ್ದಾರೆ. ನನ್ನ ತಂದೆ ತಾಯಿಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಖ್ಯಾತ ತಮಿಳು ನಟ ಸಿದ್ದಾರ್ಥ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ವಿಮಾನ ನಿಲ್ದಾಣದ ಫೋಟೋ ಹಂಚಿಕೊಂಡಿರುವ ನಟ ಸಿದ್ದಾರ್ಥ್, ”ಖಾಲಿ ಇದ್ದ ತಮಿಳುನಾಡಿನ ಮಧುರೈ ಏರ್ಪೋರ್ಟಿನಲ್ಲಿ ”ನನ್ನ ತಂದೆ ತಾಯಿಯನ್ನು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಿ ಸಿಆರ್ಪಿಎಫ್ ಯೋಧರು ಕಿರುಕುಳ ನೀಡಿದ್ದಾರೆ. ನನ್ನ ತಂದೆ ತಾಯಿಗೆ ವಯಸ್ಸಾಗಿದೆ. ಅವರ ಬ್ಯಾಗಿನಿಂದ ನಾಣ್ಯಗಳನ್ನು ಹೊರ ತೆಗೆಯಲು ಹೇಳಿ ಬಹಳ ಹೊತ್ತು ಹಿಂದಿಯಲ್ಲೇ ಮಾತನಾಡಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುವಂತೆ ಮನವಿ ಮಾಡಿದರೂ ಬಹಳ ರೂಡ್ ಆಗಿ ನಡೆದುಕೊಂಡಿದ್ದಾರೆ. ಅವರು ಇದನ್ನು ಪ್ರಶ್ನೆ ಮಾಡಿದಾಗ ಭಾರತದಲ್ಲಿ ಹೀಗೇ ನಡೆಯುತ್ತದೆ ಎಂದಿದ್ದಾರೆ. ಕೆಲಸ ಇಲ್ಲದ ಜನರು ತಮ್ಮ ಈ ರೀತಿ ತಮ್ಮ ಪವರ್ ತೋರಿಸುತ್ತಿದ್ದಾರೆ” ಎಂದು ಸಿದ್ದಾರ್ಥ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.ನಟ ಸಿದ್ದಾರ್ಥ್ ಪೋಸ್ಟ್ಗೆ ನೆಟಿಜನ್ಸ್ ಕಮೆಂಟ್ ಮಾಡಿ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮಗೂ ಕೂಡಾ ಒಮ್ಮೆ ಈ ರೀತಿ ಅನುಭವ ಆಗಿತ್ತು ಎಂದು ಒಂದಿಬ್ಬರು ನೆಟಿಜನ್ಸ್ ಕಮೆಂಟ್ ಮಾಡಿದ್ದರೆ, ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಾಗಿ ಅವರ ಕರ್ತವ್ಯ ಅವರು ಮಾಡಿದ್ದಾರೆ. ಸಾಮಾನ್ಯ ಜನರು, ಸೆಲೆಬ್ರಿಟಿಗಳು ಎಂದು ನೋಡದೆ ಎಲ್ಲರನ್ನೂ ಅವರು ಸೆಕ್ಯೂರಿಟಿ ಉದ್ದೇಶಕ್ಕಾಗಿ ಎಲ್ಲರನ್ನೂ ಇದೇ ರೀತಿ ಪರಿಶೀಲನೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…