ಭೋಪಾಲ್ : ಲಂಚ ಕೊಡಲು ಹಣ ಇಲ್ಲದ್ದಕ್ಕೆ ಹೊಟ್ಟೆಯಲ್ಲಿಯೇ ಸತ್ತ ಮಗು!

ಭೋಪಾಲ್ : ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಆಗದಿರುವುದಕ್ಕೆ ಮಹಿಲೆಯಬ್ಬರು ಹೊಟ್ಟೆಯಲ್ಲಿ ಸಾವನ್ನಪ್ಪಿದ ಮಗುವಿಗೆ ಜನ್ಮ ನೀಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಈ ಘಟನೆ ಮಧ್ಯಪ್ರದೇಶದ ಭಿಂಡ್‌ ನ ಜಿಲ್ಲಾಸ್ಪತ್ರೆ ಹತ್ತಿರ ನಡೆದಿದೆ.ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿದೆ.ಭಿಂಡ್‌ ನ ರಾಜುಪುರ ಗ್ರಾಮದ ನಿವಾಸಿ ಆರು ತಿಂಗಳ ಗರ್ಭಿಣಿ ಕಲ್ಲೋ ಅವರು ತಡರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಪತಿ ಹಾಗೂ ಪತ್ತೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ 5 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಇವರ ಬಳಿ ಹಣ ಇಲ್ಲ ಎದು ಹೇಳಿದ್ದಾರೆ. ಬೇರೆ ಕಡೆ ಅಲ್ಟ್ರಾಸೌಂಡ್‌ ಮಾಡಿಸುವಂತೆ ಕುಟುಂಬದವರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೇ ಮಗು ಜನಿಸಿತ್ತು. ಆದರೆ ಶಿಶು ಮೃತಪಟ್ಟಿತ್ತು.ನಾವು ಭಿಂಡ್‌ ಜಿಲ್ಲಾಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ಶುಶ್ರೂಷಾಧಿಕಾರಿಗಳು ನನ್ನ ಸೊಸೆಗೆ ವೈದ್ಯಕೀಯ ಚಿಕಿತ್ಸೆ ಪ್ರಾರಂಭಿಸುವ ಮೊದಲು ನಮ್ಮಿಂದ 5 ಸಾವಿರ ರೂ. ಲಂಚ ಕೇಳಿದರು. ನಾವು ಬಡವರು, ಹಣ ಇಲ್ಲ ಎಂದು ಹೇಳಿದಾಗ, ಸಿಬ್ಬಂದಿ ನಮ್ಮೆಲ್ಲರನ್ನು ಆಸ್ಪತ್ರೆಯಿಂದ ಹೊರಹಾಕಿದರು. ಆಸ್ಪತ್ರೆಯ ಹೊರಗೆ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು ಎಂದು ಮಹಿಳೆ ಅತ್ತೆ ಮಿಥಿಲೇಶ್‌ ಮಿರ್ಧಾ ಆರೋಪಿಸಿದ್ದಾರೆ.ಮಗುವಿಗೆ ಹೊದಿಸಲು ಸ್ವಚ್ಛವಾದ ಬಟ್ಟೆಯೂ ಇಲ್ಲದ ಕಾರಣ, ಮಗುವಿನ ತಂದೆಯ ಟವೆಲ್‌ ಅನ್ನೇ ಬಳಸಲಾಯಿತು ಎಂದು ಮಿರ್ಧಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆನ್ ಲೈನ್ ಕ್ಲಾಸ್ ಎಂದು ರೂಂ ಗೆ ಹೋದ ಬಾಲಕಿ; ನೇಣು ಬಿಗಿದುಕೊಂಡು ಆತ್ಮಹತ್ಯೆ!

Tue Feb 1 , 2022
  ಬೆಂಗಳೂರು: 15 ವರ್ಷದ ಬಾಲಕಿ ತನಗೆ ಆನ್‌ ಲೈನ್‌ ತರಗತಿಯಿದೆ ಎಂದು ಮನೆಯ ರೂಂನೊಳಗೆ ಹೋಗಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.9ನೇ ತರಗತಿ ಓದುತ್ತಿರುವ ಬಾಲಕಿ ಸೋಮವಾರ ಬೆಳಗ್ಗೆ ಆನ್‌ ಲೈನ್ ತರಗತಿ ಇದೆ ಎಂದು ರೂಂನೊಳಗೆ ಹೋಗಿದ್ದಾಳೆ.ತಾಯಿ ಉಪಹಾರಕ್ಕೆ ಕರೆದರೂ ಬಾಗಿಲು ತೆರೆಯಲಿಲ್ಲ. ಆಗ ಅನುಮಾನಗೊಂಡ ತಾಯಿ ಕಿಟಕಿಯಲ್ಲಿ ನೋಡಿದ್ದಾಳೆ. ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ.ಸ್ಥಳೀಯರು ಕಾಮಾಕ್ಷಿಪಾಳ್ಯ […]

Related posts

Advertisement

Wordpress Social Share Plugin powered by Ultimatelysocial