ಭೋಪಾಲ್ : ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಆಗದಿರುವುದಕ್ಕೆ ಮಹಿಲೆಯಬ್ಬರು ಹೊಟ್ಟೆಯಲ್ಲಿ ಸಾವನ್ನಪ್ಪಿದ ಮಗುವಿಗೆ ಜನ್ಮ ನೀಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಈ ಘಟನೆ ಮಧ್ಯಪ್ರದೇಶದ ಭಿಂಡ್ ನ ಜಿಲ್ಲಾಸ್ಪತ್ರೆ ಹತ್ತಿರ ನಡೆದಿದೆ.ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿದೆ.ಭಿಂಡ್ ನ ರಾಜುಪುರ ಗ್ರಾಮದ ನಿವಾಸಿ ಆರು ತಿಂಗಳ ಗರ್ಭಿಣಿ ಕಲ್ಲೋ ಅವರು ತಡರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಪತಿ ಹಾಗೂ ಪತ್ತೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ 5 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಇವರ ಬಳಿ ಹಣ ಇಲ್ಲ ಎದು ಹೇಳಿದ್ದಾರೆ. ಬೇರೆ ಕಡೆ ಅಲ್ಟ್ರಾಸೌಂಡ್ ಮಾಡಿಸುವಂತೆ ಕುಟುಂಬದವರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೇ ಮಗು ಜನಿಸಿತ್ತು. ಆದರೆ ಶಿಶು ಮೃತಪಟ್ಟಿತ್ತು.ನಾವು ಭಿಂಡ್ ಜಿಲ್ಲಾಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ಶುಶ್ರೂಷಾಧಿಕಾರಿಗಳು ನನ್ನ ಸೊಸೆಗೆ ವೈದ್ಯಕೀಯ ಚಿಕಿತ್ಸೆ ಪ್ರಾರಂಭಿಸುವ ಮೊದಲು ನಮ್ಮಿಂದ 5 ಸಾವಿರ ರೂ. ಲಂಚ ಕೇಳಿದರು. ನಾವು ಬಡವರು, ಹಣ ಇಲ್ಲ ಎಂದು ಹೇಳಿದಾಗ, ಸಿಬ್ಬಂದಿ ನಮ್ಮೆಲ್ಲರನ್ನು ಆಸ್ಪತ್ರೆಯಿಂದ ಹೊರಹಾಕಿದರು. ಆಸ್ಪತ್ರೆಯ ಹೊರಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು ಎಂದು ಮಹಿಳೆ ಅತ್ತೆ ಮಿಥಿಲೇಶ್ ಮಿರ್ಧಾ ಆರೋಪಿಸಿದ್ದಾರೆ.ಮಗುವಿಗೆ ಹೊದಿಸಲು ಸ್ವಚ್ಛವಾದ ಬಟ್ಟೆಯೂ ಇಲ್ಲದ ಕಾರಣ, ಮಗುವಿನ ತಂದೆಯ ಟವೆಲ್ ಅನ್ನೇ ಬಳಸಲಾಯಿತು ಎಂದು ಮಿರ್ಧಾ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada