ದೇವದುರ್ಗ ವಿಧಾನಸಭಾ ಕ್ಷೇತ್ರದ ಕ್ಯಾದೀಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಾಪುರ ತಾಂಡದ 20ಕ್ಕೂ ಹೆಚ್ಚು ಯುವಕರು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಶಿವನಗೌಡ ನಾಯಕ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಭಾರತೀಯ ಜನತಾಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ಶುಕ್ರವಾರ ಅರಕೇರಾ ಪಟ್ಟಣದ ಶಾಸಕರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಡಾ.ಎಚ್.ಎ ನಾಡಗೌಡ್ರು ಹಾಗೂ ಮಂಡಲ ಅಧ್ಯಕ್ಷರಾದ ಕೆ.ಜಂಬಣ್ಣ ನೀಲಗಲ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು
ಇದೇ ವೇಳೆ ಸೇರ್ಪಡೆಯಾದ ನೂತನ ಕಾರ್ಯಕರ್ತರಿಗೆ ಹಿರಿಯ ಮುಖಂಡರಾದ ಡಾ.ಎಚ್.ಎ ನಾಡಗೌಡ್ರು ಬಿಜೆಪಿ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಭಗವಂತರಾಯ ನಾಯಕ, ಅಮರೇಶ, ನಾಗರಾಜ, ದೇವರಾಜ, ವೆಂಕಟೇಶ, ಉದಯ, ಪೀರಪ್ಪ, ಲೋಕೇಶ್, ಚಂದ್ರಪ್ಪ ಸೇರಿದಂತೆ ಅನೇಕರಿದ್ದರು.
https://play.google.com/store/apps/details?id=com.speed.newskannada