ತಮಿಳಿನ ‘ವಿಕ್ರಮ್’ ಖ್ಯಾತಿಯ ನಟಿ ಸ್ವಾದಿಷ್ಟ ಜತೆ ಶುರು ವಿನಯ್ ರಾಜ್‌ಕುಮಾರ್ ಸರಳ ಪ್ರೇಮಕಥೆ.

 

 

ಒಂದೆಡೆ ದೊಡ್ಮನೆ ಅಭಿಮಾನಿಗಳು ಯುವ ರಾಜ್‌ಕುಮಾರ್ ನಟಿಸಲಿರುವ ಮೊದಲ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಯುವ ರಾಜ್‌ಕುಮಾರ್ ಅಣ್ಣ ವಿನಯ್ ರಾಜ್‌ಕುಮಾರ್ ಅವರು ಸಾಲು ಸಾಲು ಚಿತ್ರಗಳನ್ನು ಘೋಷಿಸಿ ಹೆಚ್ಚು ಸಕ್ರಿಯರಾಗಿದ್ದಾರೆ. ಕಳೆದ ವರ್ಷವಷ್ಟೇ ವಿನಯ್ ರಾಜ್‌ಕುಮಾರ್ ನಟಿಸಿದ್ದ, ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಟೆನ್’ ಚಿತ್ರ ಬಿಡುಗಡೆಯಾಗಿತ್ತು.

ಈ ಚಿತ್ರಕ್ಕೆ ಸರಿಯಾದ ಪ್ರಚಾರ ಹಾಗೂ ಬಿಡುಗಡೆ ಎರಡೂ ಸಿಗದೇ ರಿಲೀಸ್ ಆದ ಕೇವಲ ಒಂದೇ ವಾರಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಿತ್ತು.

ಇನ್ನು ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಎಂಬ ಚಿತ್ರ ಹಲವು ವರ್ಷಗಳ ಹಿಂದೆಯೇ ಸೆಟ್ಟೇರಿ ಚಿತ್ರೀಕರಣ ಆರಂಭಿಸಿದರೂ ಸಹ ನಂತರದ ದಿನಗಳಲ್ಲಿ ಚಿತ್ರ ಏನಾಯಿತು ಎಂಬ ಅಪ್‌ಡೇಟ್ ಮಾತ್ರ ತಿಳಿಯಲಿಲ್ಲ. ಸದ್ಯಕ್ಕೆ ವಿಜಯ್ ರಾಜ್‌ಕುಮಾರ್ ಕೈನಲ್ಲಿ ಪೆಪೆ ಎಂಬ ಚಿತ್ರವಿದ್ದು, ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದಾ ವಿಭಿನ್ನ ಕಥಾಹಂದರವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್‌ಕುಮಾರ್ ಸದ್ಯ ಲವ್ ಸ್ಟೋರಿ ಇರುವ ಚಿತ್ರಕಥೆಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.

ಕಳೆದ ಕಲೆ ದಿನಗಳ ಹಿಂದಷ್ಟೇ ಅಂದೊಂದಿತ್ತು ಕಾಲ ಎಂಬ ಚಿತ್ರವನ್ನು ಘೋಷಿಸಿದ್ದ ವಿನಯ್ ರಾಜ್‌ಕುಮಾರ್ ಈಗ ಮತ್ತೊಂದು ಲವ್ ಸಬ್ಜೆಕ್ಟ್ ಇರುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ವಿಕ್ರಮ್ ಖ್ಯಾತಿಯ ನಟಿ ಸ್ವಾದಿಷ್ಟ ಕೃಷ್ಣನ್ ನಟಿಸಲಿದ್ದು, ಚಿತ್ರದ ಮುಹೂರ್ತ ಸಮಾರಂಭ ಇಂದು ( ಜನವರಿ 23 ) ಸರಳವಾಗಿ ನಡೆದಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು.

Mon Jan 23 , 2023
  ಮಂಡ್ಯ: ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಮಹದೇಶ್ವರ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸದೆ ಸುಮಲತಾ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಗ್ರಾಮದ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿವೆ. ಸುಮಲತಾ ಅಂಬರೀಶ್ ಅವರು ವೇದಿಕೆ ಏರುತ್ತಿದ್ದರು. ಇದೇ ವೇಳೆ ಸಂಸದೆ ಪರ ಗುಂಪು ಹಾಗೂ ಇನ್ನೊಂದು ಗುಂಪಿನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಸ್ಪರ ಕೈಕೈ ಮಿಲಾಯಿಸಿದ್ರು. ಆಗ ಮಹಿಳೆ ಸೇರಿ ಕೆಲವರು ಚೇರ್​ಗಳನ್ನ ಕೂಡ […]

Advertisement

Wordpress Social Share Plugin powered by Ultimatelysocial