ಮಂಡ್ಯದಲ್ಲಿ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು.

 

ಮಂಡ್ಯ: ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಮಹದೇಶ್ವರ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸದೆ ಸುಮಲತಾ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಗ್ರಾಮದ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿವೆ.

ಸುಮಲತಾ ಅಂಬರೀಶ್ ಅವರು ವೇದಿಕೆ ಏರುತ್ತಿದ್ದರು. ಇದೇ ವೇಳೆ ಸಂಸದೆ ಪರ ಗುಂಪು ಹಾಗೂ ಇನ್ನೊಂದು ಗುಂಪಿನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಸ್ಪರ ಕೈಕೈ ಮಿಲಾಯಿಸಿದ್ರು. ಆಗ ಮಹಿಳೆ ಸೇರಿ ಕೆಲವರು ಚೇರ್​ಗಳನ್ನ ಕೂಡ ಎತ್ತಿ ಬಿಸಾಡಿದರು.ಮಹದೇಶ್ವರ ದೇವಾಲಯ ಸಮಾರಂಭಕ್ಕೂ ಮೊದಲೇ ಯಾವುದೇ ರಾಜಕೀಯ ಮುಖಂಡರು ವೇದಿಕೆಗೆ ಬರಬಾರದು ಎಂದು ಗ್ರಾಮಸ್ಥರು ನಿರ್ಧಾರ ಮಾಡಿದ್ರು. ಆದ್ರೂ ವೇದಿಕೆಗೆ ಸುಮಲತಾರನ್ನ ಕರೆತಂದಿರುವುದಕ್ಕೆ ಕೆಲ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ. ಯಾಕೆ ಅವರನ್ನ ವೇದಿಕೆ ಹತ್ತಿಸ್ತಿದ್ದೀರಾ ಎಂದು ಕೈ ಕೈ ಮಿಲಾಯಿಸಿದ್ದಾರೆ. ಒಂದು ಗುಂಪಿನ ವಿರೋಧದ ನಡುವೆಯೂ ಸುಮಲತಾ ವೇದಿಕೆಯನ್ನು ಏರಿ ದೇವಸ್ಥಾನದ ಬಗ್ಗೆ ಮಾತನಾಡಿದ್ರು.

ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಈ ರೀತಿ ಆಗುತ್ತೆ ಅಂತಾ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. ಚುನಾವಣೆ ಹತ್ತಿರ ಬಂದಿರೋದ್ರಿಂದ ಈ ರೀತಿ ಗೊಂದಲಗಳು ಆಗುತ್ತಲೇ ಇರುತ್ತೆ. ಹೋದಲೆಲ್ಲ ಜೆಡಿಎಸ್‌ನವರೇ ಗಲಾಟೆ ಮಾಡ್ತಿದ್ದಾರೆ. ಅವರಿಗೆ ಲೋಕಸಭಾ ಚುನಾವಣೆಯ ಸೋಲನ್ನ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸೇಡಿನ ರಾಜಕಾರಣವನ್ನ ಎದುರಿಸುತ್ತೇನೆ, ನನಗೆ ಆ ಬಗ್ಗೆ ಭಯವಿಲ್ಲ ಎಂದು ಗಲಾಟೆಯ ಬಳಿಕ ಸುಮಲತಾ ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಕ್ರಾಂತಿಗಿಂತ ಪಠಾಣ್‌ಗೆ ಹೆಚ್ಚು ಶೋಸ್.

Mon Jan 23 , 2023
      ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ್ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳುತ್ತಿದ್ದು, 22 ತಿಂಗಳುಗಳ ಬಳಿಕ ದರ್ಶನ್ ನಟನೆಯ ಚಿತ್ರ ತೆರೆ ಕಾಣುತ್ತಿರುವುದರಿಂದ ಕ್ರೇಜ್ ದುಪ್ಪಟ್ಟಾಗಿದೆ. ಇನ್ನು ಈ ಬಾರಿ ಕ್ರಾಂತಿ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಎದುರಾಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. […]

Advertisement

Wordpress Social Share Plugin powered by Ultimatelysocial