ಮಂಡ್ಯ: ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಮಹದೇಶ್ವರ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸದೆ ಸುಮಲತಾ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಗ್ರಾಮದ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿವೆ.
ಸುಮಲತಾ ಅಂಬರೀಶ್ ಅವರು ವೇದಿಕೆ ಏರುತ್ತಿದ್ದರು. ಇದೇ ವೇಳೆ ಸಂಸದೆ ಪರ ಗುಂಪು ಹಾಗೂ ಇನ್ನೊಂದು ಗುಂಪಿನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಸ್ಪರ ಕೈಕೈ ಮಿಲಾಯಿಸಿದ್ರು. ಆಗ ಮಹಿಳೆ ಸೇರಿ ಕೆಲವರು ಚೇರ್ಗಳನ್ನ ಕೂಡ ಎತ್ತಿ ಬಿಸಾಡಿದರು.ಮಹದೇಶ್ವರ ದೇವಾಲಯ ಸಮಾರಂಭಕ್ಕೂ ಮೊದಲೇ ಯಾವುದೇ ರಾಜಕೀಯ ಮುಖಂಡರು ವೇದಿಕೆಗೆ ಬರಬಾರದು ಎಂದು ಗ್ರಾಮಸ್ಥರು ನಿರ್ಧಾರ ಮಾಡಿದ್ರು. ಆದ್ರೂ ವೇದಿಕೆಗೆ ಸುಮಲತಾರನ್ನ ಕರೆತಂದಿರುವುದಕ್ಕೆ ಕೆಲ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ. ಯಾಕೆ ಅವರನ್ನ ವೇದಿಕೆ ಹತ್ತಿಸ್ತಿದ್ದೀರಾ ಎಂದು ಕೈ ಕೈ ಮಿಲಾಯಿಸಿದ್ದಾರೆ. ಒಂದು ಗುಂಪಿನ ವಿರೋಧದ ನಡುವೆಯೂ ಸುಮಲತಾ ವೇದಿಕೆಯನ್ನು ಏರಿ ದೇವಸ್ಥಾನದ ಬಗ್ಗೆ ಮಾತನಾಡಿದ್ರು.
ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಈ ರೀತಿ ಆಗುತ್ತೆ ಅಂತಾ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. ಚುನಾವಣೆ ಹತ್ತಿರ ಬಂದಿರೋದ್ರಿಂದ ಈ ರೀತಿ ಗೊಂದಲಗಳು ಆಗುತ್ತಲೇ ಇರುತ್ತೆ. ಹೋದಲೆಲ್ಲ ಜೆಡಿಎಸ್ನವರೇ ಗಲಾಟೆ ಮಾಡ್ತಿದ್ದಾರೆ. ಅವರಿಗೆ ಲೋಕಸಭಾ ಚುನಾವಣೆಯ ಸೋಲನ್ನ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸೇಡಿನ ರಾಜಕಾರಣವನ್ನ ಎದುರಿಸುತ್ತೇನೆ, ನನಗೆ ಆ ಬಗ್ಗೆ ಭಯವಿಲ್ಲ ಎಂದು ಗಲಾಟೆಯ ಬಳಿಕ ಸುಮಲತಾ ಹೇಳಿದ್ದಾರೆ.
https://play.google.com/store/apps/details?id=com.speed.newskannada