ಸರ್ಕಾರದಿಂದ ಭದ್ರತಾ ಯಾರೊಬ್ಬರು ಕಾರಿನ ಗಾಜಿನ ಮೇಲೆ ಕಪ್ಪು ಸ್ಕ್ರೀನ್​ ಅಳವಡಿಸಿರಬಾರದು!

 

ಹೈದರಾಬಾದ್​: ಸರ್ಕಾರದಿಂದ ಭದ್ರತಾ ಪಡೆದವರನ್ನು ಹೊರತುಪಡಿಸಿ ಯಾರೊಬ್ಬರು ಕಾರಿನ ಗಾಜಿನ ಮೇಲೆ ಕಪ್ಪು ಸ್ಕ್ರೀನ್​ ಅಳವಡಿಸಿರಬಾರದು ಎಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಹೈದರಾಬಾದ್​ ಸಂಚಾರಿ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ.

ವಿವಿಐಪಿ, ಸೆಲೆಬ್ರಿಟಿಗಳೆನ್ನದೆ ಕಪ್ಪು ಸ್ಕ್ರೀನ್​ ಅಳವಡಿಸಿದವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.

ಪೊಲೀಸರ ತಪಾಸಣೆ ವೇಳೆ ಈಗಾಗಲೇ ಅಲ್ಲು ಅರ್ಜುನ್​, ಕಲ್ಯಾಣ್​ ರಾಮ್​, ಮಂಚು ಮನೋಜ್​ ಹಾಗೂ ತ್ರಿವಿಕ್ರಮ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ದಂಡದ ಬಿಸಿ ತಟ್ಟಿದೆ. ಅಲ್ಲದೆ, ಕಪ್ಪು ಸ್ಕ್ರೀನ್​ಗಳನ್ನು ಕಳಚಿದ್ದಾರೆ. ಇದೀಗ ಆ ಸಾಲಿಗೆ ಸಮಂತಾ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ಪೊಲೀಸ್​ ತಪಾಸಣೆ ವೇಳೆ ನಾಗಚೈತನ್ಯ ಅವರು ಕಾರು ಸಿಕ್ಕಿಬಿದ್ದಿತು. ಈ ವೇಳೆ ಕಾರಿನ ಗಾಜಿನಲ್ಲಿದ್ದ ಕಪ್ಪು ಸ್ಕ್ರೀನ್​ ಅನ್ನು ತೆಗೆಸಿದ ಪೊಲೀಸರು 700 ರೂಪಾಯಿ ದಂಡವನ್ನು ವಿಧಿಸಿದರು. ಈ ಸಂದರ್ಭದಲ್ಲಿ ನಾಗಚೈತನ್ಯ ಕಾರಿನಲ್ಲೇ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪೊಲೀಸರ ಕರ್ತವ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದೇ ಮೊದಲ ಬಾರಿಗೆ ಸಚಿವೆಯಾಗಿ ರೋಜಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.!

Tue Apr 12 , 2022
  ವಿಜಯವಾಡ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಈ ಬಾರಿ ಅನೆಕ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಅದರಲ್ಲಿ ನಟಿ ಹಾಗೂ ನಗರಿ ಕ್ಷೇತ್ರದ ಶಾಸಕಿ ರೋಜಾ ಕೂಡ ಒಬ್ಬರು. ಇದೇ ಮೊದಲ ಬಾರಿಗೆ ಸಚಿವೆಯಾಗಿ ರೋಜಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರ ಬಹುದೊಡ್ಡ ಕನಸು ನನಸಾಗುತ್ತಿದೆ. ಸದ್ಯ ರೋಜಾ ಅವರು ರಾಜಕೀಯದಲ್ಲಿ ಬಿಜಿಯಾಗಿರುವುದರ ಜತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ […]

Advertisement

Wordpress Social Share Plugin powered by Ultimatelysocial