ರಾಜ್ಯಸಭೆ ಮತ್ತು ಲೋಕಸಭೆಯ ಸಂಘರ್ಷಗಳನ್ನು ಮೀರಿಸಿದ ನಂಜನಗೂಡಿನ ಸಾಮಾನ್ಯ ಸಭೆಯ ಗೂಂಡಾ ವರ್ತನೆ
ಗೂಂಡಾ ವರ್ತನೆ ಶಕ್ತಿ ಪ್ರದರ್ಶನ ತೋರಿಸಿದ ಸದಸ್ಯರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ..?
ಅಭಿವೃದ್ಧಿಯ ವಿಚಾರ ಚರ್ಚಿಸಬೇಕಾದ ಸಭೆಯಲ್ಲಿ ಮದವೇರಿದ ಪ್ರಾಣಿಗಳಂತೆ ಅಸಭ್ಯ ವರ್ತನೆ ತೋರಿಸಿದ ಸದಸ್ಯರು
ನಡಾವಳಿ ಪುಸ್ತಕದಲ್ಲಿ ಹಿಂದಿನ ಸಭೆಯ ವಿವರಗಳನ್ನು ನಮೂದಿಸಿಲ್ಲ ಎಂಬ ಒಂದೇ ಒಂದು ನೆಪ ಸದಸ್ಯರು ತೋಳ್ಬಲದ ಪ್ರದರ್ಶನಕ್ಕೆ ಕಾರಣನಾ..!
ನಗರಸಭಾ ಸದಸ್ಯರು ತೋರಿದ ಅಸಭ್ಯ ವರ್ತನೆಯಿಂದ ಪಟ್ಟಣದ ಪ್ರಜ್ಞಾವಂತರಿಂದ ಛೀಮಾರಿ
ಅಸಾಂವಿಧಾನಿಕವಾಗಿ ನಡೆದುಕೊಂಡಿರುವ ಸದಸ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು
ವೈಯಕ್ತಿಕ ವಿಚಾರಗಳಿಗೆ ಸಾಮಾನ್ಯ ಸಭೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು
ಇಲ್ಲದಿದ್ದಲ್ಲಿ ನಗರಸಭೆ ಸೂಪರ್ ಸೀಡ್ ಮಾಡಬೇಕು ಎಂದು ಪ್ರಗತಿಪರರು ಮತ್ತು ಸಂಘಟಕರ ಆಗ್ರಹ
ನಗರಸಭೆಯ ಕಾರ್ಯವೈಖರಿ ಇಷ್ಟೊಂದು ದುರಾಡಳಿತ ತುಂಬಿ ತುಳುಕಿದರು ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಮೌನ ವಹಿಸುವುದು ಸರಿಯಲ್ಲ
ರೌಡಿಸಂ ಮತ್ತು ಗೂಂಡಾ ವರ್ತನೆಗೆ ನಂಜನಗೂಡಿನ ನಗರಸಭೆ ಸೂಕ್ತವಾದ ಸ್ಥಳವಲ್ಲ
ಮತ ಹಾಕಿ ಅಧಿಕಾರ ನೀಡಿರುವ ಮತದಾರರಿಗೆ ಅಗೌರವ ತೋರಿರುವ ನಗರಸಭೆ ಸದಸ್ಯರ ಸದಸ್ಯತ್ವವನ್ನು ವಜಾಗೊಳಿಸುವಂತೆ ಆಗ್ರಹ ಪಡಿಸಿದ ಸಂಘಟಕರು
ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ದಸಂಸ ಸಂಘಟಕ ಪಟ್ಟಣದ ವಾಸಿ ಶಂಕರಪುರ ಸುರೇಶ್ ಎಚ್ಚರಿಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: