ವಿಜಯಪುರ : ಸಚಿವ ಮುರುಗೇಶ್ ನಿರಾಣಿ ಅವರು ನನ್ನನ್ನು ಸೋಲಿಸಲು ಬರೋಬ್ಬರಿ 2 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಚಿವ ಮುರುಗೇಶ್ ನಿರಾಣಿ 2 ಕೋಟಿ ರೂ.ಖರ್ಚು ಮಾಡಿದ್ದಾರೆ. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಕ್ಷೇತ್ರದಿಂದ ನಿಲ್ಲಿಸಿ ಎರಡು ಕೋಟಿ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ಮುರುಗೇಶ್ ನಿರಾಣಿ ಅವರು ಬೆಳ್ಳುಬ್ಬಿಯನ್ನು ನಿಲ್ಲಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಬೆಳ್ಳುಬ್ಬಿಗೆ ಗಾಣಿಗೇರ ಸಮಾಜದವರೇ ಮತ ನೀಡಲಿಲ್ಲ. ಎಲ್ಲರೂ ನನಗೆ ವೋಟ್ ಮಾಡಿದರು ಎಂದು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada