ಕನ್ನಡದ ಕಲಾವಿದ ಅವಿನಾಶ್ ಅವರಿಗೆ ಈಗ ಹೊಸದೊಂದು ತಲೆ ಬಿಸಿ ಶುರುವಾಗಿ ಬಿಟ್ಟಿದೆ. ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಇಲ್ಲ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ನಟ ಅವಿನಾಶ್ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವಿನಾಶ್ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ನಟ ಅವಿನಾಶ್ ಇನ್ನಿಲ್ಲ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸುದ್ದಿ ನೋಡಿ ಹಲವರು ಗಾಬರಿ ಗೊಂಡಿದ್ದರು. ಬೇರೆಯವರು ಯಾಕೆ ಸ್ವತಃ ಅವಿನಾಶ್ ಅವರೇ ಈ ಸುದ್ದಿಯನ್ನು ನೋಡಿ ದಂಗಾಗಿ ಹೋಗಿದ್ದರಂತೆ. ಆದರೆ ಈಗ ಮತ್ತೆ ಅಂತಹದ್ದೇ ಸುದ್ದಿ ಹರಿದಾಡಿದೆ.
ಯುಟ್ಯೂಬ್ನಲ್ಲಿ ಕೆಲವು ಕಿಡಿಗೇಡಿಗಳು, ಹಿರಿಯ ಕಲಾವಿದ ಅವಿನಾಶ್ ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿ ಕೂಡ ವೈರಲ್ ಆಗಿದೆ. ಆದರೆ ಇದನ್ನು ಕಂಡು ಅವಿನಾಶ್ ಅವರು ಮತ್ತೆ ಶಾಕ್ ಆಗಿದ್ದಾರೆ. ಪದೇ ಪದೆ ಯಾಕೆ ಈ ರೀತಿ ಮಾಡುತ್ತಾರೆ ಎಂದು ಕೇಳುತ್ತಿದ್ದಾರೆ.
ಅಷ್ಟೇ ಅಲ್ಲ, ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ಅವಿನಾಶ್, ಈಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಸದ್ಯ ಕಾನೂನು ಕ್ರಮ ಕೈಗೊಳ್ಳಲು ಅವರು ಮುಂದಾಗಿದ್ದಾರೆ. ಇದೆಲ್ಲಾ ನಿಲ್ಲಬೇಕು ಅಂದರೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಇಂತಹ ಕೃತ್ಯಕ್ಕೆ ಮುಂದಾದವರಿಗೆ ಅವಿನಾಶ್ ಅವರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada