ಹೊಸ ವರ್ಷದ ಸಂಭ್ರಮಾಚರಣೆಯ ಮತ್ತಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಡಾಬಾವೊಂದರಲ್ಲಿ ಜತೆಯಾಗಿ ಕುಳಿತು ಕುಡಿದು ಕುಣಿದು ಕುಪ್ಪಳಿಸಿದ್ದ ಸ್ನೇಹಿತರೇ ತಮ್ಮ ಆಪ್ತ ಮಿತ್ರನನ್ನು ಕೊಂದು (New year tragedy) ಹಾಕಿದ್ದಾರೆ.ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಐಮರೆಡ್ಡಿ ಹಳ್ಳಿಯಲ್ಲಿ. ಕೊಲೆಯಾದವನು ಅದೇ ತಾಲೂಕಿನ ದೊಡ್ಡಗಂಜೂರು ಗ್ರಾಮದ ಮೂವತ್ತು ವರ್ಷದ ಯುವಕ ನವೀನ್ ಗೆಳೆಯರಾಗಿರುವ ಪುನೀತ್, ಅರ್ಜುನ್, ಚೇತನ್ ಮತ್ತು ನವೀನ್ ಶನಿವಾರ ರಾತ್ರಿ ಡಾಬಾದಲ್ಲಿ ಚೆನ್ನಾಗಿ ಪಾರ್ಟಿ ಮಾಡಿದ್ದರು. ಎಣ್ಣೆ ಪಾರ್ಟಿ ಜೋರಾಗಿತ್ತು. ಆದರೆ, ಪಾರ್ಟಿ ಮುಗಿದ ಮೇಲೆ ಯಾವುದೋ ಸಣ್ಣ ವಿಚಾರ ಅವರನ್ನು ಕೆಣಕಿದಂತಿದೆ. ಇದರಿಂದಾಗಿ ನವೀನ್ ಶವವಾಗಿದ್ದಾರೆ.ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುನೀತ್, ಅರ್ಜುನ್ ಮತ್ತು ಚೇತನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada