ಹೊಸದಿಲ್ಲಿ: ಐದು ವರ್ಷಗಳ ನಂತರ ದೇಶದ ವಾಹನಗಳಲ್ಲಿ ಪೆಟ್ರೋಲ್ ಬಳಕೆಯ ಅಗತ್ಯವನ್ನು ʼಹಸಿರು ಇಂಧನವುʼ ಕೊನೆಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಡಾ.ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ತಮ್ಮ ಭಾಷಣದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ಗಡ್ಕರಿ, ಹಸಿರು ಹೈಡ್ರೋಜನ್, ಎಥೆನಾಲ್ ಮತ್ತು ಇತರ ಹಸಿರು ಇಂಧನಗಳ ಬಳಕೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು.
‘ಐದು ವರ್ಷಗಳ ನಂತರ ದೇಶದಿಂದ ಪೆಟ್ರೋಲ್ ಕಣ್ಮರೆಯಾಗುತ್ತದೆ ಎಂದು ನಾನು ಪೂರ್ಣ ನಂಬಿಕೆಯಿಂದ ಹೇಳಲು ಬಯಸುತ್ತೇನೆ. ನಿಮ್ಮ ಕಾರುಗಳು ಮತ್ತು ಸ್ಕೂಟರ್ಗಳು ಹಸಿರು ಹೈಡ್ರೋಜನ್, ಎಥೆನಾಲ್ ಫ್ಲೆಕ್ಸ್-ಇಂಧನ, ಸಿಎನ್ಜಿ ಅಥವಾ ಎಲ್ಎನ್ಜಿಯ ನೆರವಿನಿಂದ ಓಡಲಿದೆ’ ಎಂದು ಅವರು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡಾ 12 ರಿಂದ 20 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಮತ್ತು ತಜ್ಞರಿಗೆ ಗಡ್ಕರಿ ಮನವಿ ಮಾಡಿದರು. “ಮಹಾರಾಷ್ಟ್ರದ ರೈತರು ಅತ್ಯಂತ ಪ್ರತಿಭಾವಂತರು, ಹೊಸ ಸಂಶೋಧನೆ ಮತ್ತು ತಂತ್ರಜ್ಞಾನದೊಂದಿಗೆ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಅಗತ್ಯವನ್ನು” ಒತ್ತಿ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann