ಸಾವು ಯಾವಾಗ ಬಂದೊದಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.

ತುಮಕೂರು: ಸಾವು ಯಾವಾಗ ಬಂದೊದಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಯಾವತ್ತಿಗೂ ಮರಣ ಎನ್ನುವುದು ಅನಿರೀಕ್ಷಿತ. ಇದೀಗ ಇಲ್ಲೊಬ್ಬ ವ್ಯಕ್ತಿ ಹುಟುಹಬ್ಬ ಆಚರಿಸಿಕೊಂಡ ಮರುದಿನ ಶವವಾಗಿ ಪತ್ತೆಯಾಗಿದ್ದಾನೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿನ್ನಪ್ಪನಹಳ್ಳಿಯ ನಿವಾಸಿ ಮಂಜುನಾಥ್ ಎಂಬಾತ ರಾತ್ರಿ ಸ್ನೇಹಿತರ ಜತೆಗೂಡಿ ಸಂಭ್ರಮದಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ.

ಬಳಿಕೆ ಮನೆಗೆ ಬಂದು, ಮತ್ತೆ ಮನೆಯಿಂದ ಹೊರ ಹೋಗಿದ್ದಾನೆ. ಬೆಳಗ್ಗೆಯಾದರೂ ಹೊರ ಹೋಗಿದ್ದ ಮಂಜುನಾಥ್ ಇನ್ನೂ ಬಂದಿಲ್ಲವೆಂದು ಮನೆ ಮಂದಿ ಹುಡುಕಾಟ ಆರಂಭಿಸಿದ್ದಾರೆ.

ಮನೆಮಂದಿ ಹುಡುಕಾಟ ಆರಂಭಿಸುತ್ತಿದ್ದಂತೆ ಕುಣಿಗಲ್ ತಾಲೂಕಿನ ಕಿತ್ತನಾ ಮಂಗಲ ಕೆರೆಯಲ್ಲಿ ಮಂಜುನಾಥ್​ ಶವ ಪತ್ತೆಯಾಗಿದೆ. ಇದೀಗ ಮಂಜುನಾಥ್ ಸಾವಿನ ಬಗ್ಗೆ ಪತ್ನಿ ಹರ್ಷಿತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜುನಾಥ್ ಕೊಲೆಯಾಗಿ ಹೋದನೋ ಅಥವಾ ಮನೆಗೆ ಮರಳುವಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದನೋ ಎಂಬಿತ್ಯಾದಿ ಅನುಮಾನಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪನ‌ ಗೆಲುವಿಗಾಗಿ ಅಖಾಡಕ್ಕಿಳಿದ ಮಗಳು..

Sun Feb 5 , 2023
ಮಂಡ್ಯ: ಇನ್ನೂ ವಿಧಾನಸಭಾ ಎಲೆಕ್ಷನ್​ ದಿನಾಂಕ ನಿಗದಿಯಾಗದಿದ್ದರೂ ರಾಜ್ಯದಲ್ಲಿ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಸದ್ಯ ನಾಗಮಂಗಲ ಕ್ಷೇತ್ರದಲ್ಲಿ ಅಪ್ಪನನ್ನ ಗೆಲ್ಲಿಸಿಕೊಡಿ ಎಂದು ಮತದಾರರ ಬಳಿ ಸುರೇಶ್ ಗೌಡ ಪುತ್ರಿ ಧನ್ಯತಾ ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ. ನನ್ನ ತಂದೆಯ ಪರವಾಗಿ ಮೊದಲ ಬಾರಿಗೆ ನಾನು ಕ್ಯಾಂಪೇನ್​ ಮಾಡಲು ಬಂದಿದ್ದೀನಿ. ಈ ಬಾರಿ ನಮ್ಮ ತಂದೆ ವಿರುದ್ಧ ಮೂರು ಜನ ಎಲೆಕ್ಷನ್​ಗೆ ನಿಂತಿದ್ದಾರೆ. ಇದು ಎಲ್ಲರಿಗೂ ಸಿಂಗಲ್ ಪಾಯಿಂಟ್ ಅಜೆಂಡಾ. ಹೇಗೆಯಾಗಲಿ […]

Advertisement

Wordpress Social Share Plugin powered by Ultimatelysocial