ಮಕ್ಕಳಲ್ಲಿ ಕಾಡುವ ಕಫಕ್ಕೆ 5-10 ಮಿಲಿ ಈರುಳ್ಳಿ ರಸಕ್ಕೆ 10 ಗ್ರಾಂ ಕಲ್ಲು ಸಕ್ಕರೆ ಸೇರಿಸಿ ನಿಯಮಿತ ಪ್ರಮಾಣದಲ್ಲಿ ಸೇವಿಸಲು ಕೊಟ್ಟಾಗ ಕಫ ಕಡಿಮೆಯಾಗುತ್ತದೆ. ಹಸಿ ಈರುಳ್ಳಿ ಅಥವಾ ಬೇಯಿಸಿದ ಈರುಳ್ಳಿಯ ಸೇವನೆಯಿಂದ ಹೊಟ್ಟೆ ಶುದ್ಧವಾಗಿ, ಜೀರ್ಣಕ್ರಿಯೆ ಹೆಚ್ಚುತ್ತದೆ.ಮುಟ್ಟಿನ ಅವಧಿಯಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಬಿಳಿ ಈರುಳ್ಳಿಯ ರಸವನ್ನು 20-30 ಮಿಲಿ ಸೇವಿಸಿದರೆ, ರಕ್ತಸ್ರಾವ ತಡೆಗಟ್ಟುತ್ತದೆ.ಬಿಳಿ ಈರುಳ್ಳಿ ರಸಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಚರ್ಮದ ತುರಿಕೆ, ಕಜ್ಜಿಯ ಮೇಲೆ ಲೇಪನ ಮಾಡಿದರೆ ಅನುಕೂಲವಾಗುತ್ತದೆ.ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ, ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ.
20 ಮಿಲಿ ಈರುಳ್ಳಿ ರಸಕ್ಕೆ 125 ಎಂ.ಜಿ ಹಿಂಗು ಮತ್ತು 1 ಗ್ರಾಂ ಕಪ್ಪು ಉಪ್ಪನ್ನು ಸೇರಿಸಿ ಸೇವಿಸಿದರೆ, ಹೊಟ್ಟೆ ಉಬ್ಬರ ಹಾಗೂ ನೋವು ಶಮನವಾಗುತ್ತದೆ.ಮೂಲವ್ಯಾಧಿಗೆ ಒಂದು ಈರುಳ್ಳಿಯನ್ನು ಜಜ್ಜಿ ಅರೆದು ಲೇಪನ ಮಾಡಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.ಈರುಳ್ಳಿ ಬೀಜವನ್ನು ನೀರಿನಲ್ಲಿ ಅರೆದು ಬಿಳಿ ಮಚ್ಚೆ ರೋಗಕ್ಕೆ ಲೇಪಿಸಿದಲ್ಲಿ ಬಿಳಿ ಮಚ್ಚೆ ನಿಯಂತ್ರಣವಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada