ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಸಮಾಜದ ಒಳಿತಿಗಾಗಿ ದುಡಿಯೋಣ ಶಾಸಕ ರಾಜಶೇಖರ್ ಪಾಟೀಲ್ ಬೀದರ್ ಜಿಲ್ಲೆ ಚಿಟ್ಗುಪ್ಪ ಪಟ್ಟಣದ ಸದ್ಭೋದನಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜಿನ ವಾರ್ಷಿಕೋತ್ಸವದ ಹಾಗೂ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಶಾಸಕ ಪಾಟೀಲ್. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ.ಈ ನಡುವೆ ನಾವು ಸಮಾಜದ ಒಳಿತಿಗಾಗಿ ಕೈಗೊಳ್ಳುವ ಕಾರ್ಯಗಳು ನಮ್ಮನ್ನು ಮುಂದಿನ ಪೀಳಿಗೆ ನೆನೆಯುವಂತಾಗಬೇಕು ಎಂದು ತಿಳಿಸಿ. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮಿ ಸಂಸ್ಥೆಗೆ ಹಾಗೂ ಕ್ಷೇತ್ರಕ್ಕೆ ಹೆಸರು ತರಲಿ ಎಂದು ತಿಳಿಸಿದರು. ಸಮಾರಂಭದಲ್ಲಿ ಉದ್ಯಮಿ ಸಂಗಣ್ಣ ಪಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭು ಶೆಟ್ಟಿ ತುಗಾಂವ ಸಂಸ್ಥೆ ಕಾರ್ಯದರ್ಶಿ ಶಿವಲಿಂಗಪ್ಪ ಪಾಟೀಲ್ ಇನ್ನಿತರರು ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada