ನಿತ್ಯಾನಂದನಿಗೆ ಭಾರತದಿಂದ ಕಿರುಕುಳ:

ನಿವಾ: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ನಿರ್ಮಿಸಿಕೊಂಡಿರುವ “ಯುನೈಟೆಡ್‌ ಸ್ಟೇಟ್ಸ್‌ ಆಫ್ ಕೈಲಾಸ’ ರಾಷ್ಟ್ರದ ಪ್ರತಿನಿಧಿ ಸ್ವಿಜರ್‌ಲ್ಯಾಂಡ್‌ನ‌ ಜಿನಿವಾದಲ್ಲಿ ಕಳೆದ ವಾರ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದಾರೆ.

ಈ ವೇಳೆ ಭಾರತದಿಂದ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿನಿಧಿ ಆರೋಪಿದ್ದಾರೆ. ಜತೆಗೆ ಹಿಂದೂಗಳಿಗಾಗಿ ಸ್ಥಾಪಿಸಲಾಗಿರುವ ಮೊದಲ ಸಾರ್ವಭೌಮ ರಾಷ್ಟ್ರ ಎಂದಿದ್ದಾರೆ.ವಿಶ್ವಸಂಸ್ಥೆಯಲ್ಲಿ ನಡೆದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ 19ನೇ ಸಭೆಯಲ್ಲಿ ವಿಶ್ವಸಂಸ್ಥೆಗೆ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿ ವಿಜಯಪ್ರಿಯ ನಿತ್ಯಾನಂದ ಭಾಗವಹಿಸಿದ್ದರು. ಇದಾದ ನಂತರ ಕೈಲಾಸ ರಾಷ್ಟ್ರದ ಮತ್ತೂಬ್ಬ ಪ್ರತಿನಿಧಿ ಇ.ಎನ್‌.ಕುಮಾರ್‌ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ವಿಶ್ವಸಂಸ್ಥೆಯು “ಕೈಲಾಸ’ ರಾಷ್ಟ್ರವನ್ನು ಗುರುತಿಸಿದೆಯೇ ಎಂಬುದು ಇನ್ನು ಖಚಿತವಾಗಿಲ್ಲ.

ಈಕ್ವೆಡಾರ್‌ ಕರಾವಳಿ ಬಳಿಯ ದ್ವೀಪವನ್ನು ಖರೀದಿಸಿರುವ ನಿತ್ಯಾನಂದ, 2020ರಲ್ಲಿ “ಯುನೈಟೆಡ್‌ ಸ್ಟೇಟ್ಸ್‌ ಆಫ್ ಕೈಲಾಸ’ ಎಂದು ನಾಮಕರಣ ಮಾಡಿದ್ದಾನೆ. ಈ ರಾಷ್ಟ್ರಕ್ಕೆ ಪ್ರತ್ಯೇಕ ಪಾಸ್‌ಪೋರ್ಟ್‌, ರಾಷ್ಟ್ರಧ್ವಜ, “ರಿಸರ್ವ್‌ ಬ್ಯಾಂಕ್‌ ಆಫ್ ಕೈಲಾಸ’ ಇದೆ. ನಿತ್ಯಾನಂದ ವಿರುದ್ಧ ಅತ್ಯಾಚಾರ ಸೇರಿದಂತೆ ಅನೇಕ ಆರೋಪಗಳಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ ಭವಿಷ್ಯ.

Wed Mar 1 , 2023
    ಖಿನ್ನತೆಯನ್ನು ಹೊಡೆದೋಡಿಸಿ – ಇದ ನಿಮ್ಮನ್ನು ಆವರಿಸಿಕೊಳ್ಳುತ್ತಿದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಈ ಜಗತ್ತಿನ ಬಾಗಿಲುಗಳನ್ನು ಮುಚ್ಚಿ ನಿಮಗೆ ನೀವೇ ಒಳ್ಳೆಯ ವೈಭೋಗ ನೀಡಿಕೊಳ್ಳುವುದೊಳ್ಳೆಯದು. ನಿಮ್ಮ ಪ್ರೇಮಮಯ ವೀಕ್ಷಣೆಗಳನ್ನು ಅಭಿವ್ಯಕ್ತಿಗೊಳಿಸಿ. ದೇಶಿ ವ್ಯಾಪಾರಕ್ಕೆ ಸೇರಿರುವ ಜನರು, ಇಂದು ಅವರು ಅಪೇಕ್ಷಿತ ಫಲಿತಾಂಶವನ್ನು ಪಡೆಯುವ ಸಂಪೂರ್ಣ ಭರವಸೆ ಇದೆ. […]

Advertisement

Wordpress Social Share Plugin powered by Ultimatelysocial