ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪ!

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನ ಮೇಲೆ ಮಂಗಳೂರು ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
ಈತ ಮಂಗಳೂರು ನಗರದ ಕಾವೂರಿನಲ್ಲಿ ತರಕಾರಿ ವ್ಯಾಪಾರಿಯಾಗಿದ್ದಾನೆ.
ಈ ಅಪ್ರಾಪ್ತೆಯು ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಈ ಬಾಲಕಿ ಆರೋಪಿ ಮುಸ್ತಫಾನ ಅಂಗಡಿಗೆ ತರಕಾರಿ ಕೊಳ್ಳಲು ಹೋಗುತ್ತಿದ್ದ ವೇಳೆ ಆತ ತನ್ನ ಮೊಬೈಲ್ ನಂಬರ್ ನೀಡಿ ಫೋನ್ ಮಾಡುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಫೋನ್ ಮಾಡುತ್ತಿರಲಿಲ್ಲ. ಆದರೆ ಯಾವುದೋ ಕಾರ್ಯಕ್ಕೆ ಆರೋಪಿಯ ಮೊಬೈಲ್ ಗೆ ತುರ್ತು ಕರೆ ಮಾಡಿದ್ದ ವೇಳೆ ಆತ ಆಕೆಯ ತಾಯಿಯ ಮೊಬೈಲ್ ನಂಬರ್ ಅನ್ನು ಸೇವ್ ಮಾಡಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಜುಲೈ 8ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಚಾರವನಯ ಯಾರಿಗಾದರೂ ತಿಳಿಸಿದರೆ ಕೊಲ್ಲುತ್ತೇನೆಂದು ಬೆದರಿಕೆಯೊಡ್ಡಿದ್ದ. ಆದ್ದರಿಂದ ಬೆದರಿದ ಬಾಲಕಿ ಈ ಕೃತ್ಯದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಜುಲೈ 16ರಂದು ತಾಯಿಗೆ ಈ ವಿಷಯ ತಿಳಿಸಿದ ಬಳಿಕ ದೂರು ನೀಡಲಾಗಿದೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯಕ್ಕೆ ಪೆಟ್ರೋ ಪ್ಯಾಕ್ ಚಿತ್ರತಂಡ ಭೇಟಿ..

Mon Jul 18 , 2022
ಮಂಡ್ಯಕ್ಕೆ ಪೆಟ್ರೋ ಪ್ಯಾಕ್ ಚಿತ್ರತಂಡ ಭೇಟಿ.. ಮಂಡ್ಯದಲ್ಲಿ ನಟ ನೀನಾಸಂ ಸತೀಶ್ ಗೆ ಅದ್ದೂರಿ ಸ್ವಾಗತ.. ಪಟಾಕಿ ಸಿಡಿಸಿ ಹೂ ಮಳೆ ಸುರಿದು ಸ್ವಾಗತಿಸಿದ ಅಭಿಮಾನಿಗಳು.. ಮಂಡ್ಯದ ಸಂಜಯ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ ನೀನಾಸಂ ಸತೀಶ್.. ಈ ವೇಳೆ ಸೇಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು.. ಖುಷಿಯಿಂದ ಅಭಿಮಾನಿಗಳಿಗೆ ಫೋಸ್ ಕೊಟ್ಟ ನಟ ಸತೀಶ್.. ಬಳಿಕ ಅಭಿಮಾನಿಗಳೊಂದಿಗೆ ತಮಟೆ ಸದ್ದಿಗೆ ಸ್ಟೇಪ್ ಹಾಗಿದ ನೀನಾಸಂ ಸತೀಶ್.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial