ಬೆಂಗಳೂರು: ಆಫ್ ಹೆಲ್ಮೆಟ್ ಧರಿಸಿದವನಿಂದ 100 ರೂಪಾಯಿ ಸ್ವೀಕರಿಸಿದ ಪ್ರಕರಣ ಸಂಬಂಧ ಬೆಂಗಳೂರಿನ ಎಚ್ಎಎಲ್ ಸಂಚಾರ ಠಾಣಾ ಕಾನ್ಸ್ಟೇಬಲ್ ಪವನ್ ದ್ಯಾಮಣ್ಣನವರ್ ಅಮಾನತುಗೊಳಿಸಲಾಗಿದೆ. ಇತ್ತೀಚಿಗಷ್ಟೇ ದ್ವಿಚಕ್ರ ವಾಹನ ಸವಾರನಿಂದ ಕಾನ್ ಸ್ಟೇ ಬಲ್ ಪವನ್ ದ್ಯಾಮಣ್ಣನವರ್ ಹಣ ಸ್ವೀಕರಿಸುವ ವಿಡಿಯೋ ವೈರಲ್ ಆಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ವೇಳೆ ಹಣ ಸ್ವೀಕರಿಸುವುದು, ಬಳಿಕ ಹಣ ವಾಪಾಸ್ ಮಾಡಿರುವುದು ಸಾಭೀತು ಹಿನ್ನೆಲೆ ಸಂಚಾರ ಠಾಣಾ ಕಾನ್ಸ್ಟೇಬಲ್ ಪವನ್ ದ್ಯಾಮಣ್ಣನವರ್ ಅಮಾನತುಗೊಳಿಸಿ ಜಂಟಿ ಆಯುಕ್ತ ಡಾ. ಬಿ. ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಗೆ ದಂಡ ವಿಧಿಸುವ ಅಧಿಕಾರವಿಲ್ಲ. ಎಎಸ್ ಐ ಮೇಲ್ದರ್ಜೆಯ ಅಧಿಕಾರಿಗಳಿಗೆ ಮಾತ್ರ ದಂಡ ವಿಧಿಸುವ ಅಧಿಕಾರವಿದೆ ಅಂತ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada