‘ಸಂಸದೆ V/S ಶಾಸಕರ ನಡುವೆ ಧಮ್-ತಾಕತ್ತಿನ ಸದ್ದು.’.
ಮತ್ತೆ ಮುನ್ನಲೆಗೆ ಬಂದ ಸಂಸದೆ v/s ದಳಪತಿಗಳ ವಾಕ್ಸಮರ..
ತಾಕತ್ ಇದ್ರೆ ಪುಟ್ಟರಾಜು ರಾಜಕೀಯ ನಿವೃತ್ತಿ ಪಡೆದು ನುಡಿದಂತೆ ನಡೆಯಲಿ
ನನ್ನ ಹೆಸರು ಬಳಸಿಕೊಂಡು ಪುಟ್ಟರಾಜು ಮೈಲೆಜ್ ತಗೊಳ್ತಿದ್ದಾರೆ.
ಧಮ್,ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಹೇಳಲಿ ಶಾಸಕ ಪುಟ್ಟರಾಜು ಹೇಳಿಕೆ ವಿಚಾರ.
ಶಾಸಕ ಪುಟ್ಟರಾಜು ವಿರುದ್ದ ಸಂಸದೆ ಸುಮಲತಾ ಆಕ್ರೋಶ.
ತಾಕತ್ತು ಬಗ್ಗೆ ಮಾತನಾಡಕೋ ಹೋದ್ರೆ ಹಳೆಯ ಮಾತನ್ನ ನೆನೆಪು ಮಾಡ್ಕೊಳಬೇಕಾಗುತ್ತೆ.
ಚುನಾವಣೆ ಟೈಮ್ ನಲ್ಲಿ ನಮ್ಮ ಅಭ್ಯರ್ಥಿ ಎರಡೂವರೆ ಲಕ್ಷ ಲೀಡ್ ನಲ್ಲಿ ಗೆಲ್ಲಿಲ್ಲ ಅಂದ್ರೆ ರಾಜಕಾರಣದಿಂದ ನಿವೃತ್ತಿ ಅಂತ ಹೇಳಿದ್ರು.
ತಾಕತ್ ಇದ್ರೆ ನುಡಿದಂತೆ ಮಾಡಲಿ ಫಸ್ಟ್
ಅಮೇಲೆ ನಮ್ಮ ಬಗ್ಗೆ ಮಾತನಾಡಲು ಬರಲಿ.
ಚುನಾವಣೆ ಹತ್ತಿರ ಬರ್ತಿದೆ ಅವರಿಗೆ ಪಬ್ಲಿಸಿಟಿ ಬೇಕು.
ನನ್ನ ಹೆಸರು ಬಳಸಿಕೊಂಡು ಮೈಲೆಜ್ ತಗೋಳ್ತಿದ್ದಾರೆ.
ನಾನು ರಾಜಧನವನ್ನ ವಂಚಿಸಿದವರು ಅಂತ ಹೇಳಿದ್ದು ಅವರ ಹೆಸರು ಹೇಳಿದ್ದಿನಾ?
ಅದ್ಯಾಕೆ ಕುಂಬಳಕಾಯಿ ಕಳ್ಳರತರ ಹೆಗಲು ಮುಟ್ಟಿನೊಡ್ಕೊಳೋದು ಏನಕ್ಕೆ?
ರಾಜಧನ ವಂಚಿಸುತ್ತಿರುವವರು ಹಲವರು ಇದ್ದಾರೆ.
ನಾನು ಯಾಕೆ ಪ್ರೂಫ್ ಕೊಡಲಿ?
ಗಣಿ ಇಲಾಖೆಯಿಂದ ಮಾಹಿತಿ ತಗೊಳ್ಳಿ ಅವರು ತಾನೇ ಶಾಸಕರು.
ಇಷ್ಟು ವರ್ಷ ಯಾಕೆ ಆ ಕೆಲಸ ಮಾಡಿಲ್ಲ?
ನೂರಾರು ಕೋಟಿ ರಾಯಲ್ಟಿ ಪೆಂಡಿಗ್ ಇದೆ.
ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿ ಒಂದಷ್ಟು ಹಣ ಕಟ್ಟಿಸಿದ್ದೇವೆ ಸಕ್ಸಸ್ ಸಿಕ್ಕಿದೆ.
ರಾಯಲ್ಟಿ ಕಟ್ಟಿಸುವ ಕೆಲಸವನ್ನ ಅವರೇ ಮಾಡಿಸಬಹುದಿತ್ತು ಯಾಕೆ ಮಾಡಿಲ್ಲ?
ಅದನ್ನ ಬಿಟ್ಟು ಯಾರು ರಾಯಲ್ಟಿ ಕಟ್ಟದವರ ಪರ ಸಮರ್ಥನೆ ಮಾಡ್ತಿದ್ದಾರೆ.
ಕುಂಬಳಕಾಯಿ ಕಳ್ಳ ನೀವೇ ಅಂತ ತಾನೇ ಅರ್ಥ.
ನನ್ನ ಹೆಸರು ತೆಗೆದುಕೊಂಡರೆ ಮಾಧ್ಯಮದಲ್ಲಿ ಅವರಿಗೆ ಪಬ್ಲಿಸಿಟಿ ಸಿಗುತ್ತೆ ಅಷ್ಟೆ.
ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ.
https://play.google.com/store/apps/details?id=com.speed.newskannada