ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಕರ್ನಾಟಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ಹೊರಟಿದ್ದ ಮೋದಿ 11 ಗಂಟೆ ಸುಮಾರಿಗೆ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ರಾಜ್ಯದ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ವಿಶೇಷ ಸೇನಾ ಹೆಲಿಕಾಪ್ಟರ್ಗಳ ಮೂಲಕ ಕೊಡೇಕಲ್ನತ್ತ ಪ್ರಯಾಣಿಸಿದ್ದಾರೆ. ಯಾದಗಿರಿಗೆ ಬರ್ತಿರೋ ಮೋದಿ, ಜಲಧಾರೆ ಮಿಷನ್ ಯೋಜನೆಯಡಿ, ಬಸವಸಾಗರ ಡ್ಯಾಂನ ಸ್ಕಾಡಾ ಕಾಲುವೆ ಉದ್ಘಾಟಿಸಲಿದ್ದಾರೆ. ಇದು ಒಂದು ಸಾವಿರ 4 ಕೋಟಿ ರೂಪಾಯಿಯ ಯೋಜನೆ ಆಗಿದೆ.
ಇದೇ ವೇಳೆ, 2 ಸಾವಿರದ 54 ಕೋಟಿ ಮೊತ್ತದ ಬಹುಗ್ರಾಮ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ವಿಶೇಷವೆಂದ್ರೆ, ಈ ಯೋಜನೆಯಡಿ 713 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗ್ತಿದೆ. ಈ ಮೂಲಕ ಯಾದಗಿರಿಯಲ್ಲೇ ಸುಮಾರು 4 ಸಾವಿರದ 234 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.
https://play.google.com/store/apps/details?id=com.speed.newskannada