ಯಾರ ಬಗ್ಗೆ ಭಯ ಇರತ್ತೋ ಅವರನ್ನೆ ಟಾರ್ಗೆಟ್ ಮಾಡುತ್ತಾರೆ ಅಲ್ವಾ ?

ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕುಷ್ಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿಗೂ ನನ್ನ ಬಗ್ಗೆ ಬಗ್ಗೆ ಭಯ ಇದೆ ಹಾಗಾಗಿ ನನ್ನ ಟಾರ್ಗೆಟ್ ಮಾಡ್ತಿದ್ದಾರೆ.

ನನ್ನ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದನ್ನು ಅವರನ್ನೇ ಕೇಳಿ ಎಂದರು.

ನಾನು ಕೊಪ್ಪಳ ಜಿಲ್ಲೆಯಿಂದ ಸ್ಪರ್ಧೆ ಮಾಡುವುದಿಲ್ಲ. ಸ್ಥಳಿಯ ಮುಖಂಡರು ಅಭಿಮಾನಕ್ಕಾಗಿ ಅವರು ಹೇಳುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ‌. ಬಹುತೇಕ ಕಡೆ ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಇದೆ. ಆದರೆ ಇನ್ನು ಚುನಾವಣೆ ದೂರ ಇದೆ ಆಗ ನೋಡೋಣ ಎಂದರು.

ಪಿಎಸೈ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರ, ಅಕ್ರಮ ನಿಲ್ಲಬೇಕು. ಅರ್ಹರಿಗೆ ಅವಕಾಶ ಸಿಗಬೇಕು. ಯಾರು ತಪ್ಪು ‌ಮಾಡುತ್ತಾರೋ ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಆಚಾರ್ಯ' ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗವಹಿಸಿದ್ದ,ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಕೊನಿಡೇಲಾ!

Sun Apr 24 , 2022
ಕಳೆದ ರಾತ್ರಿ ಹೈದರಾಬಾದ್‌ನಲ್ಲಿ ಆಯೋಜಿಸಲಾದ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಆಚಾರ್ಯ’ ಪ್ರಿ-ರಿಲೀಸ್ ಈವೆಂಟ್‌ನೊಂದಿಗೆ ಪವರ್ ಜೋಡಿ ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಕೊನಿಡೇಲಾ ಎಲ್ಲರ ಗಮನ ಸೆಳೆದಿದ್ದಾರೆ. ಮೆಗಾಸ್ಟಾರ್‌ಗಳು ನಿರೀಕ್ಷಿತ ಕಾರ್ಯಕ್ರಮವನ್ನು ಅಲಂಕರಿಸಿದರು, ಇದು ಪ್ರೇಕ್ಷಕರಿಗೆ ಸಾಹಸ ನಾಟಕದ ಮೊದಲ ನೋಟವನ್ನು ನೀಡಿತು. ಉಪಾಸನಾ ಸ್ಟಾರ್-ಸ್ಟಡ್ ಈವೆಂಟ್‌ಗಾಗಿ ಸುಂದರವಾದ ನೀಲಿ-ಬಿಳಿ ಮನೀಶ್ ಮಲ್ಹೋತ್ರಾ ಸೀರೆಯನ್ನು ಆರಿಸಿಕೊಂಡರು, ಆದರೆ ರಾಮ್ ಚರಣ್ ಅಯ್ಯಪ ಸ್ವಾಮಿ ದೀಕ್ಷಾ ಉಡುಪಿನಲ್ಲಿ ಕಾಣಿಸಿಕೊಂಡರು. ‘ಆಚಾರ್ಯ ಅವರ […]

Advertisement

Wordpress Social Share Plugin powered by Ultimatelysocial