ತುಳಸಿಗೆ ಅಡುಗೆ ಮನೆಯಿಂದ ಘಮ ಘಮ ಎಂದು ಪರಿಮಳ ಬರುತ್ತಾ ಇರುತ್ತದೆ. ಈ ವೇಳೆ ಸಿರಿಗೆ ಬಾಯಲ್ಲಿ ನೀರು ಬರುತ್ತದೆ. ಸಿರಿ ಪೂರ್ಣಿಮಾ ಮನೆಗೆ ಹೊರಟಿರುವುದನ್ನು ಕಂಡು ತುಳಸಿ ಕೈಗೆ ಚಕ್ಕುಲಿಯನ್ನು ಕೊಡುತ್ತಾಳೆ. ಇದನ್ನು ಆಕೆಗೆ ಕೊಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿಗೆ ಬಹಳ ಖುಷಿ ಆಗುತ್ತದೆ.ಸಿರಿ ಹೋದ ಬಳಿಕ ಮತ್ತೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಯಾರಿರಬಹುದು ಎಂದು ನೋಡಲು ತುಳಸಿ ಬಾಗಿಲು ತೆಗೆಯುತ್ತಾಳೆ. ಅಲ್ಲಿ ಪಕ್ಕದ ಮನೆ ಚೋಟು ಇರುತ್ತಾನೆ. ಸನ್ ಗ್ಲಾಸ್ ಹಾಕಿಕೊಂಡು ಬಂದಿರುವುದನ್ನು ನೋಡಿದ ತುಳಸಿಗೆ ಆಶ್ಚರ್ಯ ಆಗುತ್ತದೆ.ಇನ್ನೂ ಚೋಟು ಮನೆಯ ಒಳಗೆ ಬರುತ್ತಾನೆ. ಬಂದು ತುಳಸಿ ಬಳಿ ಫ್ರೆಂಡ್ ಬಗ್ಗೆ ವಿಚಾರಣೆ ಮಾಡುತ್ತಾನೆ. ಇನ್ನು ಇದನ್ನೆಲ್ಲ ಕೇಳಿದ ತುಳಸಿ ಚೋಟುಗೆ ಚಕ್ಕುಲಿಯನ್ನು ಕೊಟ್ಟು ಇಬ್ಬರು ಮಾತನಾಡಲು ತೊಡಗುತ್ತಾರೆ. ಚೋಟು ಟಿವಿ ಹಾಕಲು ಹೇಳುತ್ತಾನೆ. ತುಳಸಿ ಫೇವರೇಟ್ ಶೋ ಬರುತ್ತದೆ. ಅದುವೇ ಒಗ್ಗರಣೆ ಡಬ್ಬಿ. ಟಿವಿಯಲ್ಲಿ ಮಾಧವ ಅವರನ್ನು ನೋಡಿ ಚೋಟು ಆಂಟಿ ಇವರು ನಮ್ಮ ಮನೆಗೆ ಎರಡು ಬಾರಿ ಬಂದಿದ್ದರು, ಅವರನ್ನು ಮೀಟ್ ಮಾಡಿಸಬೇಕು ಎಂದುಕೊಂಡಿದ್ದೆ ಆದರೆ ಅಮ್ಮ ಬಿಡಲಿಲ್ಲ ಎಂದು ಹೇಳಿದಾಗ ತುಳಸಿ ಜೋರಾಗಿ ನಗುತ್ತ ಇರುತ್ತಾಳೆ. ತುಳಸಿ ಚೋಟು ಬಳಿ ಅವರನ್ನು ನಾನು ಭೇಟಿ ಆಗಿದ್ದೇನೆ ಎಂದು ಹೇಳುತ್ತಾಳೆ.ಇನ್ನು ಮಾಧವ ಕೆಫೆಯಲ್ಲಿ ಬಹಳ ಬ್ಯುಸಿ ಆಗಿರುತ್ತಾನೆ. ಇದನ್ನು ನೋಡಿದ ಸದಾ ಹಾಗೂ ಮ್ಯಾಗಿ ಸರ್ ಇವತ್ತು ಮನೆಗೆ ಬರುತ್ತಾರಾ ಇಲ್ವಾ ಎಂದು ಅಂದುಕೊಂಡಿದ್ದೆ, ಸರ್ ಇವತ್ತು ಬೆಳಗ್ಗೆನೇ ಬಂಡಿದ್ದಾರಲ್ಲ ಎಂದುಕೊಳ್ಳುತ್ತಾರೆ. ಆಗ ಮ್ಯಾಗಿ ಮನೆಯಲ್ಲಿ ಏನಾದರೂ ಆದಾಗ ಅದನ್ನು ಮರೆಯಲು ಸರ್ ಈ ರೀತಿ ಕೆಫೆಗೆ ಬೇಗ ಬರುತ್ತಾರೆ ಎಂದು ಹೇಳುತ್ತಾಳೆ. ಮಾಧವ ಎಷ್ಟೇ ಕೆಫೆಯಲ್ಲೀ ಓಡಾಡಿದರೂ ಪೂರ್ಣಿಮಾ ಹಾಗೂ ಮಹೇಶ ನೆನಪಾಗುತ್ತಾ ಇರುತ್ತಾರೆ.
https://play.google.com/store/apps/details?id=com.speed.newskannada