ದಕ್ಷಿಣ ಭಾರತದ ಸಿನಿಮಾಗಳ ಜನಪ್ರಿಯ ಡಬ್ಬಿಂಗ್ ಕಲಾವಿದ ನಿಧನ.

ಕ್ಷಿಣ ಸಿನಿಮಾ ಸ್ಟಾರ್​ಗಳ ನೆಚ್ಚಿನ ಡಬ್ಬಿಂಗ್ ಕಲಾವಿದ ಶ್ರೀನಿವಾಸ್ ಮೂರ್ತಿ ಕೊನೆಯುಸಿರೆಳೆದಿದ್ದಾರೆ. ರಿಯಲ್​ ಸ್ಟಾರ್​ ಉಪೇಂದ್ರ ಸಿನಿಮಾಗಳು ತೆಲುಗಿಗೆ ವಾಯ್ಸ್​ ಡಬ್ಬ ಆಗಬೇಕಾದ್ರೆ ಅದಕ್ಕೆ ಶ್ರೀನಿವಾಸ್ ಮೂರ್ತಿಯವರೇ ವಾಯ್ಸ್​ ಡಬ್​​ ಮಾಡುತ್ತಿದ್ದರು.

1990ರಲ್ಲಿ ಶ್ರೀನಿವಾಸ್​ ‘ಒಕೇ ಒಕ್ಕಡು’ ಎನ್ನುವ ಅರ್ಜುನ್​ ಸರ್ಜಾ ಅಭಿನಯದ ಸಿನಿಮಾಕ್ಕೆ ವಾಯ್ಸ್​ ಮೊಟ್ಟ ಮೊದಲ ಬಾರಿಗೆ ನೀಡಿದ್ರು. ಅಲ್ಲಿಂದ ಇವರೇ ವಾಯ್ಸ್ ಡಬ್ಬಿಂಗ್​ನಲ್ಲಿ ಮೊದಲಿಗರಾಗಿ ಗುರುತಿಸಿಕೊಂಡರು. ತಮಿಳು ನಟ ಸೂರ್ಯ, ಅಜಿತ್, ವಿಕ್ರಮ್, ಕೇರಳದ ಮೋಹನ್ ಲಾಲ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಜನಪ್ರಿಯ ನಟರ ಚಿತ್ರಗಳಿಗೆ ತೆಲುಗಿನಲ್ಲಿ ಡಬ್ಬಿಂಗ್ ಮಾಡ್ತಿದ್ದರು. ಅಲ್ಲದೇ ತೆಲುಗಿಗೆ ಡಬ್​ ಆಗ್ತಿದ್ದ ಬಹುತೇಕ ಸಿನಿಮಾಗಳ ನೆಗೆಟಿವ್​ ರೋಲ್​ಗಳಿಗೆ ಇವರದ್ದೇ ವಾಯ್ಸ್​ ಇರುತ್ತಿತ್ತು.

ಬಾಲಿವುಡ್​ನ ಶಾರುಖ್ ಖಾನ್, ಸಲ್ಮಾನ್ ಖಾನ್ ಚಿತ್ರಗಳಿಗೆ ತೆಲುಗು ಡಬ್ ಮಾಡಿದ್ದ ಶ್ರೀನಿವಾಸ್ ಮೂರ್ತಿ ಹಾಲಿವುಡ್​ ಚಿತ್ರಗಳು ಬಂದಾಗಲೂ ತಮ್ಮ ವಿಶಿಷ್ಠ ಧ್ವನಿಯಿಂದ ಗಮನ ಸೆಳೆದಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಸೇರ್ಪಡೆಗೆ ಸುಮಲತಾ ಸಮ್ಮತಿ; ಆರ್‌ ಅಶೋಕ್‌ ಜೊತೆ ಮಾತುಕತೆ ಯಶಸ್ವಿ.

Fri Jan 27 , 2023
ಮಂಡ್ಯದ ಸಂಸದೆ ಸುಮಲತಾ ಅಂಬರೀಷ್‌ ಬಿಜೆಪಿ ಸೇರ್ಪಡೆಗೆ ಸಹಮತ ಸೂಚಿಸಿದ್ದು, ಶೀಘ್ರದಲ್ಲೆ ಈ ಬಗ್ಗೆ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ. ‘‘ಸುಮಲತಾ ಅವರು ಬಿಜೆಪಿಗೆ ಸೇರಲು ಆಸಕ್ತರಾಗಿದ್ದಾರೆ. ಇದರಿಂದ ಅವರ ರಾಜಕೀಯ ಭವಿಷ್ಯಕ್ಕೂ, ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಬಿಜೆಪಿಗೂ ಅನುಕೂಲವಾಗುತ್ತದೆ. ಈ ಎಲ್ಲವನ್ನೂ ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಪಕ್ಷದ ವರಿಷ್ಠರ ಸಮ್ಮತಿ ಬಳಿಕ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ,’’ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ನಡುವೆ, ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಗೆ ನಟ […]

Advertisement

Wordpress Social Share Plugin powered by Ultimatelysocial