ಭಾರತ ವಿರೋಧಿ ಪೋಸ್ಟರ್‌.

 

ಸ್ವಿಜರ್‌ಲ್ಯಾಂಡ್‌ನ‌ ಜಿನಿವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಯ ಎದುರು ಭಾರತ ವಿರೋಧಿ ಪೋಸ್ಟರ್‌ಗಳನ್ನು ಹಾಕಿರುವ ಬಗ್ಗೆ ಸ್ವಿಜರ್‌ಲ್ಯಾಂಡ್‌ ರಾಯಭಾರಿಗೆ ಭಾರತ ಭಾನುವಾರ ಸಮನ್ಸ್‌ ಜಾರಿಗೊಳಿಸಿದೆ.ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ(ಪಶ್ಚಿಮ) ಅವರು ನವದೆಹಲಿಯಲ್ಲಿ ಇರುವ ಸ್ವಿಜರ್‌ಲ್ಯಾಂಡ್‌ ರಾಯಭಾರಿಯನ್ನು ಕರೆದು, ಭಾರತ ವಿರೋಧಿ ಪೋಸ್ಟರ್‌ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಲ್ಲದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಜರ್‌ಲ್ಯಾಂಡ್‌ ರಾಯಭಾರಿ, ಗಂಭೀರತೆಯೊಂದಿಗೆ ಭಾರತದ ಕಳವಳದ ಬಗ್ಗೆ ಸ್ವಿಜರ್‌ಲ್ಯಾಂಡ್‌ ಸರ್ಕಾರಕ್ಕೆ ತಿಳಿಸಲಾಗುವುದು. ಜಾಹೀರಾತು ಪ್ರದರ್ಶನಕ್ಕೆ ವಿಶ್ವಸಂಸ್ಥೆ ಕಟ್ಟಡದ ಎದುರು ಎಲ್ಲರಿಗೂ ಅವಕಶವಿದೆ. ಆದರೆ ಈ ಪೋಸ್ಟರ್‌ಗೂ ಸ್ವಿಜರ್‌ಲ್ಯಾಂಡ್‌ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನು ರಾಶಿ ಭವಿಷ್ಯ.

Mon Mar 6 , 2023
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ […]

Advertisement

Wordpress Social Share Plugin powered by Ultimatelysocial