ಸಿದ್ದರಾಮಯ್ಯನವರ ಹಾಗೆ ನಮಗೂ ಮಾತನಾಡಲು ಬರುತ್ತದೆ.ಪ್ರಹ್ಲಾದ ಜೋಶಿ

ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಧಮ್ ಗಿಮ್ ಎಂದು ಮಾತನಾಡುವುದು ಅವರ ಘನತೆಗೆ ತಕ್ಕನಾದುದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹಾಗೆ ನಮಗೂ ಮಾತನಾಡಲು ಬರುತ್ತದೆ.

ಆದರೆ ನಾವು ಯಾರಿಗೂ ಅಗೌವರದಿಂದ ಮಾತನಾಡುವುದಿಲ್ಲ. ಧಮ್ ದಮ್ಮು ಎಂಬ ಶಬ್ದಗಳನ್ನು ಸಣ್ಣ ಹುಡುಗರ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದರು.

ಆರ್ ಎಸ್ ಎಸ್ ಮತ್ತು ಎಸ್ ಡಿಪಿಐ ಹೋಲಿಕೆ ಮಾಡುವುದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನದ ಹೇಳಿಕೆಗೆ ಸಾಕ್ಷಿಯಾಗಿದೆ. ನೆಹರು ಕಾಲದಲ್ಲಿ ವಲ್ಲಭ ಬಾಯಿ ಪಟೇಲ್ ಗೃಹಮಂತ್ರಿಯಾಗಿದ್ದಾಗ ಗಣರಾಜ್ಯೋತ್ಸವದ ಪಥ ಸಂಚನಲ್ಲೂ ಆರ್ ಎಸ್ ಎಸ್ ಗೆ ಅವಕಾಶ ನೀಡಲಾಗಿತ್ತು ಎನ್ನುವುದನ್ನು ಅವರು ಮರೆಯಬಾರದು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬರಿದಾದ ಬೊಕ್ಕಸದಿಂದ ಗುತ್ತಿಗೆದಾರರ ಬಾಕಿ ಬಿಲ್!

Fri Apr 22 , 2022
  ಪಾವತಿ ಕಷ್ಟಸಾಧ್ಯವಾಗುತ್ತಿದ್ದು, ಬಾಕಿ ಬಿಲ್ ಬೆಟ್ಟದಷ್ಟು ಬೆಳೆದಿದೆ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ಬಿಲ್ ಪಾವತಿಸಲು ಸರ್ಕಾರ ಶೇ. 40ವರೆಗೆ ಕಮಿಷನ್‍ಗೆ ಕೈವೊಡ್ಡುತ್ತಿದೆ ಎಂಬ ಆರೋಪವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಅದರಲ್ಲೂ ಪಂಚಾಯತ್‍ರಾಜ್ ಇಲಾಖೆ, ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಬಾಕಿ ಬಿಲ್ ಬೆಳೆದು ನಿಂತಿದೆ. ಈ ಪ್ರಮುಖ ಮೂರು ಇಲಾಖೆಗಳ ಮೇಲೆ ಈ ಕಮಿಷನ್ ಆರೋಪ ಕೇಳಿ ಬಂದಿದ್ದು, ಸದ್ಯ ಈ ಮೂರು ಇಲಾಖೆಗಳ ಬಾಕಿ ಬಿಲ್ […]

Advertisement

Wordpress Social Share Plugin powered by Ultimatelysocial