ತುಮಕೂರಿನಲ್ಲಿ ನಡೆದ ಯಾತ್ರೆ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಈ ಯಾತ್ರೆಯ ಮೂಲಕ ನಾವು ಹಲವು ಗ್ಯಾರಂಟಿಗಳನ್ನ ಹೊತ್ತು ತಂದಿದ್ದೇವೆ. ಅದರಲ್ಲಿ ಈಗಾಗಲೇ ಎರಡು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ ಎಂದರು.
ಯಾತ್ರೆ ಮೂಲಕ ಕಾಂಗ್ರೆಸ್ ಹೊತ್ತು ತಂದ ಗ್ಯಾರಂಟಿಗಳ ಪೈಕಿ ಒಂದು ಮಹಿಳೆಯರಿಗೆ 2000 ರೂಪಾಯಿ ನೀಡುವುದು ಮತ್ತು 2000 ಯುನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮನೆಯ ಬಜೆಟ್ ಅನ್ನು ಹಾಳು ಮಾಡಿಬಿಟ್ಟಿದೆ. ಮೋದಿ ಹಾಲಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಪನ್ನೀರ್ ಮೇಲೂ ಜಿಎಸ್ಟಿ ಹಾಕಿದ್ದಾರೆ ಎಂದರು.
ಮೋದಿ ಸರ್ಕಾರ ಮ್ಯಾಗಿ ಸೇರಿದಂತೆ ಇತರ ಆಹಾರಗಳ ಮೇಲೆ ಜಿಎಸ್ಟಿ ಹಾಕಿದ್ದರೆ. ಅಷ್ಟೇ ಅಲ್ಲದೆ ಜನರು ನಿತ್ಯ ಹಾಕುವ ಬಟ್ಟೆ ಮೇಲೂ ಜಿಎಸ್ಟಿ ಹಾಕಿದ್ದಾರೆ. ಇನ್ನೊಂದು ಸ್ವಲ್ಪ ದಿನ ಹೋದರೆ ನೀವು ಉಸಿರಾಡುವ ಗಾಳಿಯ ಮೇಲೂ ಜಿಎಸ್ಟಿ ಹಾಕಿಬಿಡುತ್ತಾರೆ ಎಂದು ಹೇಳುತ್ತಾ ಮೋದಿ ವಿರುದ್ಧ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ನಮ್ಮ ಘೋಷಣೆಗಳನ್ನು ಕೇಳಿ ಇದಕ್ಕೆಲ್ಲ ನಿಮಗೆ ಹಣ ಎಲ್ಲಿ ಬರುತ್ತೆ ಅಂತಾ ಬಿಜೆಪಿ ನಾಯಕರು ಪದೇ ಪದೇ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ನಾನು ಹೇಳುತ್ತೇನೆ. ರಾಜ್ಯದ ಈಗಿನ ಬಜೆಟ್ ಒಂದೂವರೆ ಲಕ್ಷ ಕೋಟಿ. ಮುಂದಿನ ದಿನಗಳಲ್ಲಿ ಇದು 2 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಇದರಲ್ಲಿ ನೀವೇನು (ಬಿಜೆಪಿ) 40 ಪರ್ಸೆಂಟ್ ಕಮಿಷ್ ಪಡೀತಿರಾ ಇದ್ದೀರಾ ಅದು ಕೂಡ ಒಳಗೊಂಡಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಎಂ.ಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ತುಮಕೂರಿಗೆ ಬಸ್ ಮೂಲಕವೇ ಆಗಮಿಸಿದರು. ಯಾತ್ರೆ ಬಸ್ ಮೇಲೆ ಕಾರ್ಯಕರ್ತರು ಹೂಮಳೆ ಸುರಿದರಲ್ಲದೆ ಕೋಡಿ ಸರ್ಕಲ್ ಬಳಿ ನಾಯಕರಿಗೆ ಬೃಹತ್ ಗುಲಾಬಿ ಹಾರ ಹಾಕಲಾಯಿತು. ಬಳಿಕ ಅಮಾನಿಕೆರೆ ಬಳಿಯಿರುವ ಗ್ಲಾಸ್ ಹೌಸ್ನಲ್ಲಿ ಬೃಹತ್ ಸಮಾವೇಶ ನಡೆಯಿತು.
https://play.google.com/store/apps/details?id=com.speed.newskannada