ಬಿಜೆಪಿ ಯುವ ಮುಖಂಡ ಪ್ರವೀಣ್ ಹಂತಕರನ್ನು ಎನ್ಕೌಂಟರ್ ಮಾಡಬೇಕು : ಪ್ರಮೋದ್ ಮುತಾಲಿಕ್ ಆಗ್ರಹ

ಹುಬ್ಬಳ್ಳಿ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ರಾಜೀನಾಮೆ ಕೊಡಬೇಕು. ನೀವು ಅಧಿಕಾರದಲ್ಲಿರಲು ನಾಲಾಯಕ್ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಮೃತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಕೊಡಬೇಕು. ಮೃತ ಪ್ರವೀಣ್ ಕನಸು ನನಸು ಮಾಡಬೇಕು ನೆರವು ನೀಡಿ ಮನೆ ಕಟ್ಟಿಸಿಕೊಡಬೇಕು. ಪಿಎಫ್ ಐ, ಎಸ್ ಡಿಪಿಐ ಮೊದಲು ನಿಷೇಧ ಮಾಡಬೇಕು. ಆಗಸ್ಟ್ 5 ರಂದು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹಿಂದೂಪರ ಸಂಘಟನೆಗಳು ಹೋರಾಟ ಮಾಡಿ ಪಿಎಫ್ ಐ, ಎಸ್ ಡಿಪಿಐ ನಿಷೇಧ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಶಸ್ವಿ ಸ್ಟೆಮ್ ಸೆಲ್ ಕಸಿ ನಂತರ ಏಡ್ಸ್, ಬ್ಲಡ್ ಕ್ಯಾನ್ಸರ್ ನಿಂದ ವಾಸಿಯಾದ ಅತ್ಯಂತ ಹಳೆಯ HIV ರೋಗಿಯು

Thu Jul 28 , 2022
66 ವರ್ಷದ ವ್ಯಕ್ತಿಯೊಬ್ಬರು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಮತ್ತು ರಕ್ತದ ಕ್ಯಾನ್ಸರ್‌ನಿಂದ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಮೂಲಕ ಗುಣಮುಖರಾದರು ಮತ್ತು ರೋಗಕ್ಕೆ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ನಿಲ್ಲಿಸಿದ ನಂತರ 18 ತಿಂಗಳುಗಳವರೆಗೆ ಉಪಶಮನದಲ್ಲಿದ್ದರು. 1988 ರಲ್ಲಿ ಎಚ್ಐವಿ ರೋಗನಿರ್ಣಯ ಮಾಡಲಾಯಿತು, ಅವರು 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಸ್ಥಿತಿಯನ್ನು ನಿಯಂತ್ರಿಸಲು ಆಂಟಿರೆಟ್ರೋವೈರಲ್ ಥೆರಪಿ (ಎಆರ್ಟಿ) ಯಲ್ಲಿದ್ದರು. 2007 ರಲ್ಲಿ “ಬರ್ಲಿನ್ ರೋಗಿಯ” ತಿಮೋತಿ ರೇ ಬ್ರೌನ್ […]

Advertisement

Wordpress Social Share Plugin powered by Ultimatelysocial