ಬಿಜೆಪಿ ಶಾಸಕ ಪ್ರೀತಮ್ ಗೌಡ ಮಾಡಿರುವ ಸವಾಲನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕುಟುಂಬ ಸ್ವೀಕರಿಸಿದ್ದು, ಹಾಸನ ಕ್ಷೇತ್ರದ ಗುಟ್ಟನ್ನು ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬಿಟ್ಟುಕೊಟ್ಟಿದ್ದಾರೆ. ಹಾಸನಕ್ಕೆ ರೇವಣ್ಣ ಕುಟುಂಬದ ಸದಸ್ಯರೇ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದಾರೆ.ಇಂದು (ಜ.10) ವರದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ನಾವು ಯಾವಾಗ ತಾನೇ ಸವಾಲಿಗೆ ತಯಾರಿಲ್ಲ ಅಂತ ಹೇಳಿದ್ದೀವಿ. ನಾವು ಸವಾಲಿಗೆ ನೂರಕ್ಕೆ ನೂರು ತಯಾರಿದ್ದೇವೆ. ಎಲ್ಲಾದ್ರೂ ನಾವು ಸವಾಲನ್ನು ಬಿಡ್ತಿವಾ? ರೇವಣ್ಣ ಕುಟುಂಬ ಯಾವತ್ತೋ ಸವಾಲನ್ನು ತಗೆದುಕೊಂಡಿದೆ ಎಂದು ಪ್ರಜ್ವಲ್ ಹೇಳಿದರು.ನಾವು ಯಾವತ್ತು ಸವಾಲಿನ ಹಿಂದೆ ಹೋದವರಲ್ಲ. ಅವನು (ಪ್ರೀತಂ ಗೌಡ) ಇನ್ನು ಹತ್ತು ಸವಾಲು ಹಾಕಿದರೂ ಎದುರಿಸುವ ಶಕ್ತಿ ನಮಗಿದೆ. ನಮ್ಮ ಜತೆ ಜನ ಇದ್ದಾರೆ. ಜನರ ಜೊತೆ ಸವಾಲು ಎದುರಿಸುತ್ತೇವೆ. ಇವತ್ತಿಗೂ ಆ ಸವಾಲಿಗೆ ಬದ್ಧವಾಗಿದ್ದೇವೆ. ಯವಾಗ ತಾನೆ ಹಿಂದೆ ಸರಿದಿದ್ದೀವಿ?ಎಂಥಾ ಸವಾಲು ಹಾಕಿದರು ನಾವು ರೆಡಿ ಎಂದರು.ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ 15 ಸಾವಿರ ಲೀಡ್ ತೆಗೆದುಕೊಳ್ಳಲಿಲ್ಲ ಅಂದ್ರೆ ಹಾಸನ ಜಿಲ್ಲೆಗೆ ತಲೆ ಹಾಕಲ್ಲ ಅಂತ ಹೇಳಿದ್ದೆ, ಹಾಸನದಲ್ಲಿ ನಾನು 16 ಸಾವಿರ ಲೀಡ್ ತೆಗೆದುಕೊಳ್ಳಳಿಲ್ವಾ? ಎನ್ನುವ ಮೂಲಕ ಕೊನೆಗೂ ಹಾಸನ ಶಾಸಕ ಪ್ರೀತಮ್ ಸವಾಲನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸ್ವೀಕರಿಸಿದ್ದಾರೆ.
https://play.google.com/store/apps/details?id=com.speed.newskannada