ರಿಯಲ್ ಸ್ಟಾರ್ ಉಪೇಂದ್ರ ಮತ್ತು ಮಂಜು ಮಾಂಡವ್ಯ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಬರುತ್ತೆ ಅನ್ನೋ ಸುದ್ದಿ ಕೆಲ ವರ್ಷಗಳಿಂದ ಕೇಳಿ ಬರ್ತಿದೆ. ಆ ನಡುವೆ ಉಪೇಂದ್ರ ಪಕ್ಷ ಕಟ್ಟಿ ಪ್ರಜಾಕಾರಣಕ್ಕೆ ಮುಂದಾದ್ರು. ಮತ್ತೆ ಉಪ್ಪಿ ಸಿನಿಮಾಗಳಲ್ಲಿ ನಟಿಸಲ್ಲ ಅಂತ್ಲೇ ಎಲ್ಲಾ ಅಂದುಕೊAಡಿದ್ರು. ಆದರೆ, ಉಪೇಂದ್ರ ಮತ್ತೆ ಹುಟ್ಟಿ ಬಾ, ಐ ಲವ್ ಯೂ ಸಿನಿಮಾಗಳಲ್ಲಿ ನಟಿಸಿದ ಉಪೇಂದ್ರ, ಸಿನಿಮಾ ಜೊತೆ ಜೊತೆಗೆ ಪ್ರಜಾಕಾರಣ ಮುಂದುವರೆಸೋ ಮನಸ್ಸು ಮಾಡಿದ್ರು. ಇದೀಗ ಮಂಜು ಮಾಂಡವ್ಯ ನಿರ್ದೇಶನದ ಚಿತ್ರಕ್ಕೆ ಬುದ್ಧವಂತ ಸೈ ಅಂದಿದ್ದಾರೆ.ಮಾಸ್ಟರ್ ಪೀಸ್ ಸಿನಿಮಾ ಮೂಲಕ ಭರವಸೆಯ ನಿರ್ದೇಶಕರಾಗಿ ಗುರ್ತಿಸಿಕೊಂಡ ಮಂಜು ಮಾಂಡವ್ಯ, ರಿಯಲ್ ಸ್ಟಾರ್ ಉಪೇಂದ್ರ ಅವರಿಗಾಗಿ ಹೊಸ ಕಥೆ ರೆಡಿ ಮಾಡಿದ್ದಾರೆ. ಉಪೇಂದ್ರ ಅವರ ಅಭಿಮಾನಿಯೂ ಆಗಿರುವ ಮಂಜು ಮಾಂಡವ್ಯ ಚಿತ್ರದಲ್ಲಿ ನೆಚ್ಚಿನ ನಟನನ್ನ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡ್ತಿದ್ಧಾರೆ.. ಸ್ಕ್ರಿಪ್ಟ್ ಅನ್ನ ಉಪೇಂದ್ರ ಕೂಡ ತಿದ್ದಿ ತೀಡುವ ಕೆಲಸ ಮಾಡ್ತಿದ್ದಾರೆ. ಇದೊಂದು ಕ್ರಾಂತಿಕಾರಕ ಕಥೆಯಾಗಿದ್ದು, ಒಂದೊಳ್ಳೆ ಸಂದೇಶವೂ ಚಿತ್ರದಲ್ಲಿದೆಯಂತೆ.
ಉಪ್ಪಿ- ಮಂಜು ಮಾಂಡವ್ಯ ಸಿನಿಮಾ -ಮಾಂಡವ್ಯಗೆ ಸೈ ಎಂದ ಬುದ್ಧಿವಂತ
Please follow and like us: