ನುಡಿದಂತೆ ನಡೆದ ರಿಷಬ್‌ ಶೆಟ್ಟಿ.

ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಖ್ಯಾತ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದೃಢೀಕರಿಸದ ವರದಿಗಳ ಪ್ರಕಾರ, ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಅವರು ಮೋಹನ್ ಲಾಲ್ ಅಭಿನಯದ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಹೇಳಲಾಗಿತ್ತು.

ವರದಿಯ ಪ್ರಕಾರ ‘ಕಾಂತಾರ’ ನಟನನ್ನು ‘ಮಲೈಕೋಟ್ಟೈ ವಾಲಿಬನ್’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಲು ತಯಾರಕರು ಸಂಪರ್ಕಿಸಿದ್ದಾರೆ. ಮೋಹನ್‌ಲಾಲ್ ಅವರ  ಚಿತ್ರದಲ್ಲಿ ರಿಷಬ್ ಶೆಟ್ಟಿ ಇರುವಿಕೆಯ ಸುದ್ದಿಯನ್ನು ತಯಾರಕರು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ ಈ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ.

ಮೋಹನ್‌ಲಾಲ್ ಹೊರತುಪಡಿಸಿ,  ಚಿತ್ರದಲ್ಲಿನ ಉಳಿದ ಪಾತ್ರಗಳಲ್ಲಿ ಜೀವಾ, ಕಥಾ ನಂದಿ, ಹರೀಶ್ ಪೆರಾಡಿ, ದಾನೀಶ್ ಸೇಠ್ ಮತ್ತು ಸೋನಾಲಿ ಕುಲಕರ್ಣಿ ಇದ್ದಾರೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಈ ಚಿತ್ರಕ್ಕೆ ಪ್ರಶಾಂತ್ ಪಿಳ್ಳೈ ಸಂಗೀತ ಸಂಯೋಜಕರಾಗಿದ್ದಾರೆ.

ನಟ ಮೋಹನ್‌ಲಾಲ್ ಅವರ ‘  ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿ ಒಪ್ಪಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ರಿಷಬ್ ಶೆಟ್ಟಿ, ನಟ ಮೋಹನ್‌ಲಾಲ್ ಅವರ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ತಿಳಿದುಬಂದಿದೆ. ಮುಂದಿನ ಸಿನಿಮಾ ಕನ್ನಡದಲ್ಲಿಯೇ ಮಾಡಬೇಕೆಂಬ ಉದ್ದೇಶದಿಂದ ರಿಷಬ್ ಶೆಟ್ಟಿ ಈ ಬಿಗ್‌ ಆಫರ್ ರಿಜೆಕ್ಟ್ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಸರ್ಕಾರದ ಭ್ರಷ್ಟಚಾರಕ್ಕೆ ದಾಖಲೆಗಳಿವೆ.

Mon Jan 30 , 2023
ನವದೆಹಲಿ :ಬಿಜೆಪಿ ಸರ್ಕಾರದ ಭ್ರಷ್ಟಚಾರಕ್ಕೆ ದಾಖಲೆಗಳಿವೆ. ಆದರೂ ಬಿಜೆಪಿ ಸುಳ್ಳಿನ ಸಮರ್ಥನೆ ಮೂಲಕ ಮೊಂಡು ವಾದ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅರೋಪಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಹುಲ್‍ಗಾಂಧಿ 3570 ಕಿಲೋ ಮೀಟರ್ ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಅದು ಅಷ್ಟು ಸುಲಭವಲ್ಲ, ಇದಕ್ಕೆ ಇಚ್ಚಾಶಕ್ತಿ, ಬದ್ಧತೆ ಅಗತ್ಯ. ರಾಹುಲ್‍ಗಾಂಧಿ ದೇಶದಲ್ಲಿನ ದ್ವೇಷದ ರಾಜಕಾರಣಕ್ಕೆ ಉತ್ತರವಾಗಿ ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ […]

Advertisement

Wordpress Social Share Plugin powered by Ultimatelysocial