ಬೆಂಗಳೂರು: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಅನಾರೋಗ್ಯಕ್ಕೀಡಾಗಿದ್ದಾರೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರೋ ದೇವೇಗೌಡರನ್ನು ಹಲವು ನಾಯಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಆದರೆ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರದಾನಿ ನರೇಂದ್ರ ಮೋದಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲೇ ಇಲ್ಲ.
ಹೀಗಾಗಿ ಮುಂದಿನ ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ರೆ, ದೇವೇಗೌಡರನ್ನು ಭೇಟಿ ಮಾಡಿಸಲು ಬಿಜೆಪಿ ನಾಯಕರು ಚಿಂತಿಸಿದ್ದಾರೆನ್ನಲಾಗಿದೆ.
ಯಾಕಂದ್ರೆ ಹಿರಿಯ ರಾಜಕೀಯ ನಾಯಕರೊಬ್ಬರು ಅನಾರೋಗ್ಯಕ್ಕೀಡಾದ್ರೂ ಕನಿಷ್ಠ ಆರೋಗ್ಯ ವಿಚಾರಿಸಲಿಲ್ಲ ಅನ್ನೋ ತಪ್ಪು ಸಂದೇಶ ಹೋಗಬಾರದು ಅಂತಾ ಕಮಲ ನಾಯಕರು ಚಿಂತಿಸಿದ್ದಾರೆನ್ನಲಾಗಿದೆ. ವಿಶ್ರಾಂತಿಯಲ್ಲಿರುವ ದೇವೇಗೌಡರು, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂಚಿಂಚು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
https://play.google.com/store/apps/details?id=com.speed.newskannada