ಅಂಗವಿಕಲರ ಮಾಸಾಸನ ಹೆಚ್ಚಿಸಲು ಸರಕಾರಿ ಮತ್ತು ಖಾಸಗಿ ಉದ್ಯೋಗವಕಾಶ ಹೆಚ್ಚಿಸಲು ಒತ್ತಾಯಿಸಿ ಮನವಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ಅಂಗವಿಕಲರಿಗೆ ಮಾಸಾಸನ್ 3000ಕ್ಕೆ ಹೆಚ್ಚಿಸಲು ಹಾಗೂ ಸರ್ಕಾರಿ ಮತ್ತು ಕಾಸಗಿ ಉದ್ಯೋಗವಕಾಶ ಹೆಚ್ಚಿಸಲು ಒತ್ತಾಯಿಸಿ ಮನವಿ ನೀಡಿದರು.ಬಿಜೆಪಿ ಸರ್ಕಾರದ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಬಜೆಟ್ ಅಂಗವಿಕಲರನ್ನು ನಿರ್ಲಕ್ಷ್ಯ ಮಾಡಿ ಎಲ್ಲ ಅಂಗವಿಕಲರಿಗೆ ಮತ್ತು ಪಾಲಕರಿಗೆ ತೀವ್ರ ನಿರಾಶೆ ಉಂಟುಮಾಡಿದೆ ಬಿಜೆಪಿ ಪಕ್ಷ ತನ್ನ ಕರ್ನಾಟಕ ರಾಜ್ಯ ಚುನಾವಣಾ ಪ್ರಣಾಳಿಕೆಯ ಪುಟ್ಟ 21ರಲ್ಲಿ ದಿವ್ಯಂಗ ಕಲ್ಯಾಣ ಶೀರ್ಷಿಕೆ ಅಡಿಯಲ್ಲಿ ಅಂಗವಿಕಲರಿಗೆ ಮಾಶಾಸನ ಪಿಂಚಣಿ 3000 ರೂಪಾಯಿ ಇರಿಸಲಾಗುವುದಾಗಿ ಇಡೀ ರಾಜ್ಯದ ಮತದಾರರಿಗೆ ಭರವಸೆ ನೀಡಿ ವಂಚಿಸಿದೆ.ಆದರೆ ಬಿಜೆಪಿ ಸರ್ಕಾರ 17-02-2023ರಂದು ಮಂಡನೆ ಮಾಡಿದ ತನ್ನ ಕೊನೆಯ ವರ್ಷದ ಬಜೆಟ್ ನಲ್ಲಿಯೂ ಈ ಭರವಸೆಯನ್ನು ಅಲ್ಪ ಪ್ರಮಾಣದಲ್ಲಿಯೂ ಪೂರೈಸರೆಲ್ಲ ಅಂಗವಿಕಲರಿಗೆ ಜೀವನೋಪಾಯ ಸೃಷ್ಟಿಸಲು ಯಾವುದೇ ಕಾರ್ಯಕ್ರಮ ಉದ್ಯೋಗ ಕಲ್ಪಿಸಿ ಕೊಡುವುದರಲ್ಲಿ ಈ ಬಜೆಟ್ ವಿಫಲವಾಗಿದೆ ಅಲ್ಲದೆ ಖಾಸಗಿ ವಲಯ ಅಂಗವಿಕಲರಿಗೆ ಉದ್ಯೋಗ ಕೊಡಲು ಯಾವುದೇ ಪ್ರೋತ್ಸಾಹ ನೀಡುವುದಿಲ್ಲ ಮತ್ತು ಇದು ಅಂಗವಿಕಲರು ಶಿಕ್ಷಣ ಪಡೆಯಲು ಪೂರ್ತಿ ನೀಡುವುದಿಲ್ಲ ಈ ಬಜೆಟ್ ಅಂಗವಿಕಲ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಏನನ್ನು ಮಾಡಿರುವುದಿಲ್ಲ ಅಲ್ಲದೆ ಈ ಬಜೆಟ್ ನಲ್ಲಿ ಪ್ರವೇಶ ಸ್ನೇಹಿ ಬಗ್ಗೆ ಯಾವುದೇ ಹೇಳಿಕೆ ಇಲ್ಲ ತಹಸೀಲ್ದಾರ್ ಕಚೇರಿಗಳು ಸರ್ಕಾರಿ ಕಚೇರಿಗಳು ಬಸ್ ನಿಲ್ದಾಣಗಳು ಮತ್ತು ಅಂಗವಿಕಲರಿಗೆ ಸಂಬಂಧಪಟ್ಟ ಇತರೆ ಕಚೇರಿಗಳು ಅಂಗವಿಕಲರಿಗೆ ಪ್ರವೇಶ ಸ್ನೇಹ ಆಗಿರುವುದಿಲ್ಲ ಈ ವಿಷಯದ ಬಗ್ಗೆ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ವಿಕಲಚೇತರರನ್ನು ನೆನಪಿಸಿಕೊಳ್ಳಲಿಲ್ಲ ಬಜಾಜ್ ಚರ್ಚೆಯ ನಂತರ ಅಂತಿಮಗೊಳಿಸುವಾಗ ಕೂಡ ಕ್ರಾಂತಿ ದಿವ್ಯಂಗ ರಾಜ್ಯ ಒಕ್ಕೂಟ ಮತ್ತು ಅಂಗವಿಕಲರ ಮತ್ತು ಪಾಲಕರ ಮನವಿಯನ್ನು ಮಾನ್ಯ ಮಾಡಿ ಮಾಸಾಸನ ಹೆಚ್ಚಿಸುವುದಲ್ಲದೆ ಉದ್ಯೋಗವಕಾಶಕ್ಕೆ ಗಮನ ನೀಡಬೇಕು ಎಂದು ಒತ್ತಾಯಿಸಿ ರಬಕವಿ ಬನಹಟ್ಟಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada