ಭಾನುವಾರ ಕಿಡಿಗೇಡಿಗಳು ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖ್ಯಾತ ನಿರ್ಮಾಪಕ ಹಾಗೂ ಎಂ.ಎಲ್.ಸಿ ಸಂದೇಶ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ.
ದರ್ಶನ್ ಅದ್ಭುತ ಕಲಾವಿದ. ತಮ್ಮ ಅಭಿನಯದ ಮೂಲಕ ದರ್ಶನ್ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂತಹ ನಟನಿಗೆ ಈ ರೀತಿ ಮಾಡಿದ್ದು ತುಂಬಾ ತಪ್ಪು. ಯಾವ ಕಲಾವಿದನಿಗೂ ಈ ರೀತಿ ಆಗಬಾರದು. ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಸಾಗಬೇಕು. ಈ ರೀತಿಯ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.