ಆರ್‌.ಟಿ.ಓ. ಕಚೇರಿ ಬಳಿಯೂ ಸಹಾಯಕ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಿರುವ ಬೆಂಗಳೂರು!

ಬೆಂಗಳೂರು ಸಂಚಾರಿ ಪೊಲೀಸ್‌ನ ಪೂರ್ವ ವಿಭಾಗವು ಕೇವಲ ಎರಡೇ ದಿನಗಳ ಒಳಗೆ ನಾಲ್ಕು ಆರ್‌.ಟಿ.ಓ. ಕಚೇರಿಗಳ ಬಳಿ ಹೊಸದಾಗಿ ನೋಂದಾಯಿಸಿದ 60 ಪ್ರಕರಣಗಳಿಂದ ದಂಡದ ರೂಪದಲ್ಲಿ 24,000 ರೂ.ಗಳನ್ನು ಸಂಗ್ರಹಿಸಿದೆ.ಪ್ರತಿ ಆರ್‌.ಟಿ.ಓ. ಕಚೇರಿ ಬಳಿಯೂ ಸಹಾಯಕ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಿರುವ ಬೆಂಗಳೂರು ಸಂಚಾರಿ ಪೊಲೀಸ್, ದಂಡ ತಪ್ಪಿಸಿಕೊಂಡ ಸವಾರರಿಂದ ದಂಡ ಪೀಕಿಸುತ್ತಿದೆ.ಭಟ್ಟರಹಳ್ಳಿ  , ಕಸ್ತೂರಿ ನಗರ  , ಎಲೆಕ್ಟ್ರಾನಿಕ್ಸ್ ಸಿಟಿ   ಮತ್ತು ಎಚ್‌ಎಸ್‌ಆರ್‌ ಲೇಔಟ್‌  ಆರ್‌ಟಿಓ ಕಚೇರಿಗಳಲ್ಲಿ ಹೀಗೆ ಮಾಡಲಾಗಿದೆ.”ತಮ್ಮ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ವಾಹನಗಳ ಮಾಲೀಕರು ಆರ್‌.ಟಿ.ಓ. ಕಚೇರಿಗಳತ್ತ ಬಂದ ವೇಳೆ ನಮ್ಮ ಅಧಿಕಾರಿಗಳು ಅವರ ನೋಂದಣಿ ಸಂಖ್ಯೆಗಳ ವಿರುದ್ಧ ಯಾವುದಾದರೂ ದಂಡಗಳ ವಸೂಲು ಮಾಡುವುದು ಬಾಕಿ ಇದೆಯಾ ನೋಡುತ್ತಾರೆ. ಹಾಗೆ ಇರುವುದು ಕಂಡು ಬಂದಲ್ಲಿ, ಮಾಲೀಕರಿಗೆ ತಮ್ಮ ದಂಡ ಕಟ್ಟುವಂತೆ ಅಧಿಕಾರಿಗಳು ಮನವೊಲಿಸುತ್ತಾರೆ,” ಎನ್ನುತ್ತಾರೆ ಕೆ ಎಂ ಶಾಂತರಾಜು, ಡಿಸಿಪಿ (ಸಂಚಾರ, ಪೂರ್ವ).ಸಾರಿಗೆ ಇಲಾಖೆಯೊಂದಿಗೆ ಸಹಯೋಗದಲ್ಲಿ ಹೀಗೆ ಆರ್‌ಟಿಓ ಕಚೇರಿಗಳ ಮುಂದೆ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ಕೆಲಸ ಮಾಡಲು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರೂ ಸಹ ಸಜ್ಜಾಗುತ್ತಿದ್ದು, ದಂಡಗಳ ವಸೂಲಾತಿಗೆ ಸನ್ನದ್ಧವಾಗುತ್ತಿದ್ದಾರೆ ಎನ್ನುತ್ತಾರೆ ಕುಲ್ದೀಪ್ ಕುಮಾರ್‌ ಜೈನ್, ಡಿಸಿಪಿ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶ ರಾಜ್ಯವೂ ಕೂಡ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ಆಗುತ್ತದೆ.

Thu Feb 10 , 2022
ಲಖನೌ: ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಬೆಳಗ್ಗಿನಿಂದಲೇ ಆರಂಭವಾಗಿದೆ. ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳೂ ಸರ್ವ ಪ್ರಯತ್ನ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡುರಾತ್ರಿ ವಿಡಿಯೋ ಮೂಲಕ ರಾಜ್ಯದ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಸುಮಾರು 6 ನಿಮಿಷಗಳ ವಿಡಿಯೋ ಮಾಡಿ ಅದನ್ನು ಅವರು ನಸುಕಿನ 3 ಗಂಟೆಗೆ […]

Advertisement

Wordpress Social Share Plugin powered by Ultimatelysocial