ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ನಿಂದಲೂ ಅಭಯ ಸಿಕ್ಕಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸ್ಥಗಿತಗೊಳಿಸಬೇಡಿ ಎಂಬ ಸೂಚನೆ ಸಿಕ್ಕಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಇದು ಮಹತ್ವದ ಅಸ್ತ್ರ ವಾಗಿದ್ದು, ಸಚಿವರ ರಾಜೀನಾಮೆಯವವರೆಗೂ ಹೋರಾಟ ನಡೆಸಿ. ಒಂದೊಮ್ನೆ ರಾಜೀನಾಮೆ ನೀಡದೆ ಇದ್ದರೆ ಧ್ವಜವಿಚಾರವನ್ನು ಜೀವಂತವಾಗಿಟ್ಟು ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ಮುಂದುವರಿಸಿ ಎಂದು ಸೂಚನೆ ನೀಡಲಾಗಿದೆ.ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಂತ ಬಳಿಕ ಹಿನ್ನಡೆ ಅನುಭವಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ ಈ ಅಭಯ ಹೊಸ ಚೈತನ್ಯ ನೀಡಿದಂತಾಗಿದೆ. ಹೀಗಾಗಿ ಪ್ರತಿ ದಿನವೂ ವಿಧಾನಸಭೆಯಲ್ಲಿ ಅವರ ಹೋರಾಟಕ್ಕೆ ಚುರುಕು ಸಿಕ್ಕಿದೆ. ಈ ಉತ್ಸಾಹದಲ್ಲೇ ಮೇಕೆದಾಟು ಹೋರಾಟಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada