ನವದೆಹಲಿ : ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಬಿಹಾರ, ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಗೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನೈಋತ್ಯ ಮಾನ್ಸೂನ್ ಮುಂದಿನ 48 ಗಂಟೆಗಳಲ್ಲಿ (ಜೂನ್ 30 ಮತ್ತು ಜುಲೈ 1 ರ ನಡುವೆ) ಅರಬ್ಬಿ ಸಮುದ್ರ ಮತ್ತು ಗುಜರಾತ್ನ ಉಳಿದ ಭಾಗಗಳು, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ-ಚಂಡೀಗಢ ಮತ್ತು ದೆಹಲಿಯ ಕೆಲವು ಭಾಗಗಳಿಗೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಜೂನ್ 28-30 ರ ಅವಧಿಯಲ್ಲಿ ಉತ್ತರಾಖಂಡಕ್ಕೆ ತೀವ್ರ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಹಿಮಾಚಲ ಪ್ರದೇಶ, ಪೂರ್ವ ಉತ್ತರ ಪ್ರದೇಶ, ಕರಾವಳಿ ಕರ್ನಾಟಕ ಮತ್ತು ಜೂನ್ 29 ಮತ್ತು 30 ರಂದು ಕೇರಳ ಮತ್ತು ಮಾಹೆ, ಜೂನ್ 30 ರಂದು ಪಶ್ಚಿಮ ಉತ್ತರ ಪ್ರದೇಶ, ಜೂನ್ 30 ಮತ್ತು ಜುಲೈ 1 ರಂದು ಪೂರ್ವ ರಾಜಸ್ಥಾನ ಮತ್ತು ಪೂರ್ವ ಮಧ್ಯಪ್ರದೇಶ, 30 ಜೂನ್-2 ಜುಲೈ ಅವಧಿಯಲ್ಲಿ ಪಶ್ಚಿಮ ಮಧ್ಯಪ್ರದೇಶ, ಬಿಹಾರ , ಜೂನ್ 28 ಮತ್ತು 29 ರಂದು ಅರುಣಾಚಲ ಪ್ರದೇಶ ಮತ್ತು ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ಜೂನ್29, ಜುಲೈ 2ರಂದು ಕೊಂಕಣ ಮತ್ತು ಗೋವಾದಲ್ಲಿ ಮಳೆಯಾಗಲಿದೆ ಎನ್ನಲಾಗುತ್ತಿದೆ.
ಮಳೆ ಮುನ್ಸೂಚನೆ
ಜೂನ್ 30 ರಂದು ಉತ್ತರಾಖಂಡದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ಜೂನ್ 29 ಮತ್ತು 30 ರಂದು ಹಿಮಾಚಲ ಪ್ರದೇಶ,ಉತ್ತರಾಖಂಡ, ಪಶ್ಚಿಮ ಯುಪಿ, ಪೂರ್ವ ಯುಪಿ 29-30 ಮತ್ತು ಪೂರ್ವ ರಾಜಸ್ಥಾನದಲ್ಲಿ ಜೂನ್ 30 ಹಾಗೂ ಜುಲೈ 01 ರಂದು ಮಳೆಯಾಗಲಿದೆ.
ಜೂನ್ 29 ರಂದು ಯುಪಿಯಲ್ಲಿ ಗುಡುಗು/ಮಿಂಚಿನಿಂದ ಕೂಡಿದ ವ್ಯಾಪಕ ಮಳೆಯಾಗಲಿದೆ. ಅದರಂತೆ ಛತ್ತೀಸ್ಗಢ, ವಿದರ್ಭದಲ್ಲ, ಜೂನ್ 30 ರಿಂದ ಜುಲೈ 2ರವರ ಅವಧಿಯಲ್ಲಿ ಪಶ್ಚಿಮ ಯುಪಿಯಲ್ಲಿ ಭಾರೀ ಮಳೆಯಾಗಲಿದೆ.
ಜೂನ್ 29 ರಿಂದ ಜುಲೈ 02 ಜುಲೈ ಅವಧಿಯಲ್ಲಿ ಒಡಿಶಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ. ಅದೇ ವೇಳೆ 2 ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರದ ಮತ್ತು ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರತ್ಯೇಕವಾದ ಮಳೆಯಾಗುವ ಸಾಧ್ಯತೆಯಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada