ಮಗುವಿನ ನಿರೀಕ್ಷೆಯಲ್ಲಿ ‘ರಾಜಾ ರಾಣಿ’ ಖ್ಯಾತಿಯ ಸಮೀರ್ ಆಚಾರ್ಯ ಶ್ರಾವಣಿ ದಂಪತಿ

 

‘ರಾಜಾ ರಾಣಿ’ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಶ್ರಾವಣಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಬೇಬಿ ಬಂಪ್ ಫೋಟೋದೊಂದಿಗೆ “ಜೀವನದ ಹೊಸ ಹಂತ” ಎಂದು ಶ್ರಾವಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಗಣ್ಯರು, ಆತ್ಮೀಯರು ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.ಶ್ರಾವಣಿಗಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈ ಖಾಸಗಿ ಸಮಾರಂಭದಲ್ಲಿ ಕುಟುಂಬಸ್ಥರ ಜೊತೆ ಆತ್ಮೀಯರು ಭಾಗವಹಿಸಿದ್ದರು. ಕೊನೆ ಕೊನೆಯದಾಗಿ ‘ರಾಜಾ ರಾಣಿ’ ಶೋನಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಸೆಮಿ ಫಿನಾಲೆಯಲ್ಲಿ ಎಲಿಮಿನೇಟ್ ಆಗಿತ್ತು.ರಾಜಾ ರಾಣಿ ಶೋನಲ್ಲಿ ಮನಬಿಚ್ಚಿ ಮಾತನಾಡಿದ್ದ ಶ್ರಾವಣಿ, “ಗಂಡ-ಹೆಂಡತಿ ಸಂಬಂಧ ಶುರುವಾಗೋದು ಮದುವೆ ಅನ್ನುವ ಬಂಧದಿಂದ. ಮೊದಲು ನನಗೆ ಗರ್ಭಪಾತ ಆದಾಗ ತುಂಬ ಕಾಳಜಿ ಮಾಡಿದ್ರಿ. ನಾನು ಏನೇ ತಪ್ಪು ಮಾಡಿದ್ರೂ ಕೂಡ ತಂದೆಯು ಮಗಳನ್ನು ಕ್ಷಮಿಸುವ ಹಾಗೆ ಪ್ರತಿಸಲ ನನ್ನ ಕ್ಷಮಿಸಿದ್ರಿ” ಅಂತ ಪತಿ ಸಮೀರ್ ಆಚಾರ್ಯಗೆ ಹೇಳಿದ್ದಾರೆ. ಅದಕ್ಕೆ ಸಮೀರ್ ಉತ್ತರ ನೀಡಿದ್ದು “ಸಂಸಾರದಲ್ಲಿ ಯಾರು ಜಗಳ ಆಡಲ್ಲ ಹೇಳು, ನಾನು ನಿನ್ನ ಜೊತೆ ಇರುವೆ, ಇರುತ್ತೀನಿ” ಅಂತ ಪತ್ನಿಗೆ ಧೈರ್ಯ ತುಂಬಿದ್ದರು.ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ 101 ದಿನ ಕಾಲ ಕಳೆದಿದ್ದರು. ಆ ವೇಳೆ ಸಂಯುಕ್ತಾ ಹೆಗಡೆ ಅವರು ಆಟದ ವೇಳೆ ಸಮೀರ್ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ

Mon Jan 9 , 2023
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯರಂವಾರಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ವನಿತ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಯರಂವಾರಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 16 ಸದಸ್ಯರಿದ್ದು ಕಾಂಗ್ರೇಸ್ ಬೆಂಬಲಿತ 7 ಸದಸ್ಯರು ಹಾಗೂ ಜೆಡಿಎಸ್ ಬೆಂಬಲಿತ 9 ಸದಸ್ಯರಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನ ಪರಿಶಿಷ್ಟ ಜಾತಿ ಮೀಸಲಾತಿಯಾಗಿರುವ ಕಾರಣ ಜೆಡಿಎಸ್ ಪಕ್ಷದಲ್ಲಿ ಪರಿಶಿಷ್ಟ […]

Advertisement

Wordpress Social Share Plugin powered by Ultimatelysocial