ರಾಜೇಶ್ವರಿಗೆ ಸವಾಲು ಹಾಕಿದ ಸ್ನೇಹಾ; ಆಸ್ತಿ ಕೇಳಲು ಬಂದ ರಾಜಿ ಕಕ್ಕಾಬಿಕ್ಕಿ!.

 

ರಾಜೇಶ್ವರಿ ಮನೆಗೆ ಬಂದಿರುವುದನ್ನು ನೋಡಿ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಪುಟ್ಟಕ್ಕನನ್ನು ನೋಡಿದ ರಾಜಿ ಏನು ಪುಟ್ಟಕ್ಕ ಮದುವೆ ಆದ ಬಳಿಕ ಮನೆ ಖಾಲಿ ಮಾಡುತ್ತೀಯಾ ಅಂದರೆ ಮೆಸ್ ನಲ್ಲಿ ಎಲ್ಲಾ ಜನರನ್ನು ತುಂಬಿಸಿಕೊಂಡು ಬಿಸಿ ಬಿಸಿ ಅನ್ನ ಸಾಂಬಾರ್ ಮಾಡಿ ಹಾಕುತ್ತಿದ್ದಿಯಾ, ಇನ್ನು ಇದೆಲ್ಲ ನಡೆಯಲ್ಲ ಎಂದಾಗ ಪುಟ್ಟಕ್ಕ ರಾಜಿ ಬಳಿ ರಾಜವ್ವ ಎಷ್ಟು ಹಣ ಕೊಡಬೇಕು ಹೇಳು ಆದರೆ ಈ ಮನೆ ಮಾತ್ರ ಕೇಳಬೇಡ ನಮಗೆ ಇದೊಂದೇ ಇರುವುದು, ಮನೆ ಮೆಸ್ ಬಿಟ್ಟರೆ ನಾವು ಎಲ್ಲಿಗೆ ಹೋಗುವುದು ಎಂದು ಹೇಳುತ್ತಾಳೆ.ನೀನು ಎಲ್ಲಿಗೆ ಆದರೂ ಹೋಗು ಆದರೆ ನಾನು ಮಾತ್ರ ನಿನ್ನ ಇಲ್ಲಿ ಇರಲು ಬಿಡುವುದಿಲ್ಲ, ಈ ಮನೆ ನನಗೆ ಬೇಕೆ ಎಂದು ರಾಜಿ ಹೇಳಿ ರೌಡಿಗಳ ಬಳಿ ಹೇಳುತ್ತಾಳೆ. ನೀವು ಬಂದಿದ್ದು ಸುಮ್ಮನೆ ಕಣ್ರೋ ಪುಟ್ಟಕ್ಕನ ಎರಡನೇ ಮಗಳು ಇದ್ದಾಳೆ ಎಂದು ನಿಮ್ಮನ್ನು ಕರೆದುಕೊಂಡು ಬಂದೆ ಆದರೆ ಅದರೆ ಕಷ್ಟ ಇಲ್ಲ ಇನ್ನು ಮೇಲೆ ಎಂದು ಹೇಳುತ್ತಾರೆ. ಇನ್ನು ಪುರುಷೋತ್ತಮ ಸುಮನಾ ಬಳಿ ಎಲ್ಲಾ ವಿಚಾರ ಹೇಳಿದಾಗ ಸುಮಾಗೆ ಶಾಕ್ ಆಗಿ ಸ್ನೇಹಾಗೆ ಕರೆ ಮಾಡುತ್ತಾಳೆ.ಸುಮನಾ ಕರೆ ನೋಡಿ ಏನೇ ಸುಮಾ ಕಾಲೇಜಿಗೆ ಹೋಗಿಲ್ವ ಎಂದು ಕೇಳುತ್ತಾಳೆ. ಆದರೆ ಸುಮಾ ಅಕ್ಕನ ಬಳಿ ಪುರುಷೋತ್ತಮ ಹೇಳಿದ ಎಲ್ಲ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಏನು ಮಾಡಬೇಕು ಎಂದು ತಿಳಿಯದೇ ಕಂಠಿಯನ್ನು ಕರೆಯುತ್ತಾಳೆ. ನಮ್ಮ ಮನೆಯಲ್ಲಿ ನಡೆಯಬಾರದು ನಡೆಯುತ್ತಿದೆ ಬರುತ್ತೀರಾ ಎಂದು ಕೇಳುತ್ತಾಳೆ. ಕಂಠಿ ಬಡ್ಡಿ ವ್ಯವಹಾರ ಬಿಟ್ಟು ಅಲ್ಲಿಂದ ಪುಟ್ಟಕ್ಕನ ಮನೆಗೆ ಹೋಗುತ್ತಾನೆ. ಪುಟ್ಟಕ್ಕ ರಾಜೇಶ್ವರಿ ಬಳಿ ಪರಿ ಪರಿ ಆಗಿ ಕೇಳಿಕೊಳ್ಳುತ್ತಾಳೆ.ಆದರೆ ಪುಟ್ಟಕ್ಕ ಹಾಕುತ್ತಿರುವ ಕಣ್ಣೀರನ್ನು ನೋಡಿ ರಾಜೇಶ್ವರಿ ನಗುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಸ್ನೇಹಾ ಬರುತ್ತಾಳೆ. ಜೋರಾಗಿ ನಿಲ್ಲಿಸಿ ಎಂದು ಹೇಳಿದಾಗ ಎಲ್ಲರಿಗೂ ಭಯ ಆಗುತ್ತದೆ.‌ ಅದಕ್ಕಿಂತ ಹೆಚ್ಚಾಗಿ ಭಯ ಆಗಿದ್ದು ಕಂಚಿಯನ್ನು ನೋಡಿ. ಕಂಚಿಯನ್ನು ಕಂಡ ರೌಡಿಗಳು ಮೆತ್ತಗೆ ಹಿಂದೆ ಸರಿಯುತ್ತಾರೆ. ಇದನ್ನು ಕಂಡ ರಾಜೇಶ್ವರಿ ಯಾರನ್ನು ನೋಡಿ ಯಾರು ಹೆದರಿಕೊಳ್ಳುವ ಅಗತ್ಯ ಇಲ್ಲ, ಯಾಕೆ ಹೆದರಬೇಕು ಎಂದೆಲ್ಲ ಜೋರಾಗಿ ಮಾತನಾಡುತ್ತಾಳೆ. ಸ್ನೇಹಾ ಬಳಿ ನೀನು ಏನೇ ಮಾಡಿದರೂ ನ್ನಿನ್ನಿಂದ ಈ ಮನೆನ ಕಿತ್ತುಕೊಳ್ಳುತ್ತೇನೆ ಎಂದು ರಾಜಿ ಆಸ್ತಿ ಪತ್ರ ತೋರಿಸುತ್ತಾಳೆ. ಬಳಿಕ ಲಾಯರ್ ಗೆ ಕರೆ ಮಾಡಿ ಕೂಡ ಹೇಳುತ್ತಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜ್ಜಿ ಮಾತಿಗೆ ಬೆರಗಾದ ಮಂಜುನಾಥ್ ದಂಪತಿ; ಕಣ್ಣು ಕಾಣಿಸುತ್ತಿರುವ ವಿಚಾರ ಅಮ್ಮು ಹೆತ್ತವರಿಗೆ ತಿಳಿಯುತ್ತಾ?.

Sun Mar 5 , 2023
  ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಜನರನ್ನು ಆಕರ್ಷಿಸುವ ಹಾಗೆ ಮಾಡುತ್ತಿದೆ. ಈಗೀಗ ಆದ್ಯಾ ಪರ್ಸ್ ಕಳ್ಳತನ ಮಾಡಲಾಗಿದೆ. ಇದರಿಂದ ಆದ್ಯಾ ಜೋರಾಗಿ ಕಿರುಚುತ್ತಾ ಇರುತ್ತಾಳೆ. ಆದ್ಯಾ ಕಿರುಚಾಟ ಕಂಡು ಓಡೋಡಿ ಬಂದ ವೇದಾಂತ್ ಏನು ಎಂದಾಗ ಆದ್ಯಾ ಪರ್ಸ್ ಕಳವು ಆಗಿರುವ ಬಗ್ಗೆ ಹೇಳುತ್ತಾಳೆ.ಇದನ್ನು ಕೇಳಿದ ವೇದಾಂತ ಕಳ್ಳನನ್ನು ಬೆನ್ನಟ್ಟಿ ಹೋಗುತ್ತಾನೆಆದರೆ ಕಾಂತ ಓಡಲು ಆಗದಿದ್ದರೂ ಓಡುತ್ತಾನೆ. ಯಾಕೆಂದರೆ ಬಾಸ್ ಕೈ ಗೆ ಸಿಕ್ಕಿ ಬಿದ್ದಿರೆ ಎಲ್ಲಾ […]

Advertisement

Wordpress Social Share Plugin powered by Ultimatelysocial