ಲಕ್ಷೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಉತ್ಸವಕ್ಕೆ ಸಿದ್ಧವಾಗಿರುವ ವೇದಿಕೆ,ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ದೇವಾಲಯದ ಶ್ರೀ ಸೋಮೇಶ್ವರ ಸಹಯೋಗದಲ್ಲಿ ಮೂರು ದಿನ ನಡೆಯಲಿರುವ ಪುಲಿಗೆರೆ ಉತ್ಸವಕ್ಕೆ ಪಟ್ಟಣದಲ್ಲಿ ಇಂದು ಚಾಲನೆ ದೊರೆಯಿತು.ಇನ್ಫೋಸಿಸ್ ಫೌಂಡೇಶನ್ಹಣಕಾಸು ವ್ಯವಸ್ಥಾಪಕ ಪ್ರಶಾಂತ ಹೆಗಡೆ ಅವರು ಡಿ.16 ರಂದು ಬೆಳಗ್ಗೆ 6ಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳಗ್ಗೆ 6.30ಕ್ಕೆ ಮಾರುತಿ ಅವರಿಂದ ಶಹನಾಯಿ ವಾದನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು, ಇವರಿಗೆ ಮಲ್ಲೇಶ ಹೂಗಾರ ತಬಲಾ ಸಾಥ್ ನೀಡಿದರು.ಬೆಳಗ್ಗೆ 7.30ಕ್ಕೆ ಅಂಕುಶ ನಾಯಕ್ ಅವರು ಸಿತಾರ ವಾದನ ನುಡಿಸಿ, ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಿದರು. ಸಂಜೆ 4ಕ್ಕೆ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಬಾಗಲಕೋಟೆ ಮಹಾದೇವ ಕಲ್ಯಾಣಿ ಮತ್ತು ತಂಡದಿಂದ ಕರಡಿ ಮಜಲು ವಾದ್ಯ ವೈಭವಗಳೊಂದಿಗೆ ಉತ್ಸವ ನಡೆಯುವುದು.ಲಕ್ಷ್ಮೀಶರ ಪಟ್ಟಣದ ಪುಲಿಗೆರೆ ಸೋಮೇಶ್ವರ ದೇವಸ್ಥಾನ.3 ದಿನ ವೈವಿಧ್ಯಮಯ ಕಾರ್ಯಕ್ರಮನಾಳೆ ಸಂಜೆ 7.30ಕ್ಕೆ ವೀಣಾ ಮಣಿ ನಿರ್ದೇಶನದಲ್ಲಿ ಕೂಚಿಪುಡಿ ನೃತ್ಯ ರೂಪಕ ಶಿವಾರ್ಪಣಂ ಪ್ರಸ್ತುತಪಡಿಸಲಿದ್ದು, ಸಂಜೆ 8.30 ಕ್ಕೆಸಮುದ್ಯತ ಭಟ್ ನಿರ್ದೇಶನದಲ್ಲಿ ನಾಟ್ಯತರಂಗ ಕಲಾವಿದರಿಂದ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ಇದರೊಂದಿಗೆ ಅಂದಿನ ಉದಯರಾಗ-1 ಸಂಪನ್ನಗೊಳ್ಳಲಿದೆ.ಸಕಲ ಸಿದ್ಧತೆ:ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ಸವದ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಮತ್ತೆ ಈಗ ಆರನೇ ವರ್ಷದ ಉತ್ಸವ ನಡೆಯತಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಉತ್ಸವದಲ್ಲಿ ದೇಶ, ವಿದೇಶ, ರಾಜ್ಯದ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada