ಚಿಕ್ಕಬಳ್ಳಾಪುರ: ಜಿಲ್ಲೆ ಮಾತ್ರವಲ್ಲದೆ ವಿದೇಶಿ ಭಕ್ತರನ್ನು ಆಕರ್ಷಿಸುತ್ತಿರುವ ಮತ್ತು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಆವಲಗುರ್ಕಿ ಸಮೀಪದಲ್ಲಿರುವ ಆದಿಯೋಗಿ ಕೇಂದ್ರಕ್ಕೆ ಬಹುಭಾಷಾ ನಟ ಸೂಪರ್ಸ್ಟಾರ್ ರಜನಿಕಾಂತ್ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇತ್ತೀಚೆಗೆ ಸದ್ಗುರು ವಾಸುದೇವ್ ಅವರ ನೇತೃತ್ವದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಈಶಾ ಫೌಂಡೇಶನ್ನಿಂದ ನಿರ್ಮಾಣಗೊಂಡಿರುವ ಆದಿಯೋಗಿ ಪ್ರತಿಮೆಯನ್ನು ವೀಕ್ಷಿಸಲು, ದರ್ಶನ ಮಾಡಲು ಪ್ರತಿನಿತ್ಯ ಭಕ್ತರ ದಂಡು ಬರುತ್ತಿದೆ. ಅದರ ಸಾಲಿಗೆ ಇದೀಗ ಬಹುಭಾಷೆಯ ನಟ ಸೂಪರ್ಸ್ಟಾರ್ ರಜನಿಕಾಂತ್ ಸೇರಿದ್ದಾರೆ. ಶುಕ್ರವಾರ ಅವರ ಸಹೋದರ ಸತ್ಯನಾರಾಯಣ ಅವ ರೊಂದಿಗೆ ಆದಿಯೋಗಿ ದರ್ಶನ ಮಾಡಿದ ರಜನಿಕಾಂತ್ ಅವರನ್ನು ಈಶಾ ಫೌಂಡೇ ಶನ್ನ ಸ್ವಯಂ ಸೇವಕರು ಸ್ವಾಗತಿಸಿ, ನಂತರ ಆದಿಯೋಗಿಯ ದರ್ಶನ ಮಾಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada