ಆದಿಯೋಗಿ ದರ್ಶನ ಪಡೆದ ರಜನಿಕಾಂತ್‌!

ಚಿಕ್ಕಬಳ್ಳಾಪುರ: ಜಿಲ್ಲೆ ಮಾತ್ರವಲ್ಲದೆ ವಿದೇಶಿ ಭಕ್ತರನ್ನು ಆಕರ್ಷಿಸುತ್ತಿರುವ ಮತ್ತು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಆವಲಗುರ್ಕಿ ಸಮೀಪದಲ್ಲಿರುವ ಆದಿಯೋಗಿ ಕೇಂದ್ರಕ್ಕೆ ಬಹುಭಾಷಾ ನಟ ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ನೀಡಿ ದೇವರ ದರ್ಶನ ಪಡೆದರು.

ಇತ್ತೀಚೆಗೆ ಸದ್ಗುರು ವಾಸುದೇವ್‌ ಅವರ ನೇತೃತ್ವದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಈಶಾ ಫೌಂಡೇಶನ್‌ನಿಂದ ನಿರ್ಮಾಣಗೊಂಡಿರುವ ಆದಿಯೋಗಿ ಪ್ರತಿಮೆಯನ್ನು ವೀಕ್ಷಿಸಲು, ದರ್ಶನ ಮಾಡಲು ಪ್ರತಿನಿತ್ಯ ಭಕ್ತರ ದಂಡು ಬರುತ್ತಿದೆ. ಅದರ ಸಾಲಿಗೆ ಇದೀಗ ಬಹುಭಾಷೆಯ ನಟ ಸೂಪರ್‌ಸ್ಟಾರ್‌ ರಜನಿಕಾಂತ್‌ ಸೇರಿದ್ದಾರೆ. ಶುಕ್ರವಾರ ಅವರ ಸಹೋದರ ಸತ್ಯನಾರಾಯಣ ಅವ ರೊಂದಿಗೆ ಆದಿಯೋಗಿ ದರ್ಶನ ಮಾಡಿದ ರಜನಿಕಾಂತ್‌ ಅವರನ್ನು ಈಶಾ ಫೌಂಡೇ ಶನ್‌ನ ಸ್ವಯಂ ಸೇವಕರು ಸ್ವಾಗತಿಸಿ, ನಂತರ ಆದಿಯೋಗಿಯ ದರ್ಶನ ಮಾಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವಾರ್ಡ್‌ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ನಟ ಶಹನವಾಜ್ ಪ್ರಧಾನ್!

Sat Feb 18 , 2023
ಮುಂಬಯಿ:ಹತ್ತಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ, ಬಾಲಿವುಡ್‌ ನಟ ಶಹನವಾಜ್ ಪ್ರಧಾನ್ (56) ಹೃದಯಾಘಾತದಿಂದ ಶುಕ್ರವಾರ ( ಫೆ.17 ರಂದು) ಮೃತಪಟ್ಟಿದ್ದಾರೆ. ಮುಂಬಯಿನಲ್ಲಿ ನಡೆಯುತ್ತಿದ್ದ ಅವಾರ್ಡ್‌ ಕಾರ್ಯಕ್ರಮವೊಂದರಲ್ಲಿ ಶಹನವಾಜ್ ಪ್ರಧಾನ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಜೊತೆಗಿದ್ದವರ ಬಳಿ ಎದೆನೋವು ಆಗುತ್ತಿದೆ ಎಂದು ಹೇಳಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಬದುಕು ಬರಲು ಸಾಧ್ಯವಾಗಿಲ್ಲ. ಹಠಾತ್ ಹೃದಯಾಘಾತದಿಂದ ಅವರು […]

Advertisement

Wordpress Social Share Plugin powered by Ultimatelysocial