ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ;

ಸ್ಯಾಂಡಲ್‌ವುಡ್‌ನಲ್ಲಿ ಗಾಳಿಸುದ್ದಿಗಳಿಗೇನು ಕಮ್ಮಿ? ಗಾಂಧಿನಗರದ ಗಲ್ಲಿ ಗಲ್ಲಿಯೊಳಗೆ ದಿನಕ್ಕೆ ಒಂದಲ್ಲಾ ಒಂದು ಸುದ್ದಿ ಓಡಾಡುತ್ತಲೇ ಇರುತ್ತೆ. ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದರೆ, ಶೀಘ್ರದಲ್ಲಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಆರಂಭ ಆಗಲಿದೆಯಂತೆ.

ಮೊದಲ ಪುತ್ರ ಮನೋರಂಜನ್ ಮದುವೆಗೆ ಕ್ರೇಜಿಸ್ಟಾರ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮನೋರಂಜನ್ ಸಿನಿಮಾಗಳು ಬಿಡುಗಡೆಯಾಗಿವೆ. ಹತ್ತಿರದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದೇ ಸರಿಯಾದ ಸಮಯ ಮದುವೆ ಮಾಡಬೇಕು ಅಂತ ನಿರ್ಧಾರ ಮಾಡಿದಂತಿದೆ. ಹೀಗಾಗಿ ತಮ್ಮ ಮಗನ ಮದುವೆ ಮಾಡಲು ನಿರ್ಧರಿಸಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ, ಮನೋರಂಜನ್ ಮದುವೆ ಯಾವಾಗ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಕ್ರೇಜಿ ಮನೆಯಲ್ಲಿ ಮದುವೆ ಸಂಭ್ರಮ
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಿದ್ದಾರೆ. ‘ಸಾಹೇಬ’ ಸಿನಿಮಾದಿಂದ ಆರಂಭವಾದ ಮನೋರಂಜನ್ ಸಿನಿಮಾ ಜರ್ನಿ ಈಗ ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ‘ಪ್ರಾರಂಭ’ ಹಾಗೂ ‘ಮುಗಿಲ್ ಪೇಟೆ’ ಸಿನಿಮಾಗಳು ತೆರೆಕಂಡಿವೆ. ಈ ಸಿನಿಮಾಗಳಿಗೆ ಅದ್ಭುತ ಯಶಸ್ಸು ಸಿಗದೆ ಹೋದರೂ, ಮನೋರಂಜನ್ ನಟನೆಯ ಬಗ್ಗೆ ಕ್ರೇಜಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಈ ವರ್ಷ ಮದುವೆ ಆಗಲು ನಿರ್ಧರಿಸಿದ್ದಾರಂತೆ.

ಜೂನ್ ತಿಂಗಳಲ್ಲಿ ಪಕ್ಕಾ ಅರೇಂಜ್ ಮ್ಯಾರೇಜ್

ಸಿನಿಮಾ ಜರ್ನಿ ಆರಾಮಾಗಿ ಸಾಗುತ್ತಿದೆ. ಕೌಟುಂಬಿಕ ಜವಾಬ್ದಾರಿಗಳು ಮುಗಿದಿವೆ. ಹೀಗಾಗಿ ಮನೋರಂಜನ್ ಜೂನ್‌ನಲ್ಲಿ ಮದುವೆ ಆಗುತ್ತಾರೆ ಎನ್ನಲಾಗಿದೆ. ಕಳೆದ ವರ್ಷವೇ ಮನೋರಂಜನ್ ಮದುವೆ ಆಗುವುದಾಗಿ ಹೇಳಿದ್ದರು. ತಂದೆ-ತಾಯಿ ಇಷ್ಟ ಹುಡುಗಿಯನ್ನೇ ವಿವಾಹವಾಗುತ್ತಿದ್ದೇನೆ ಎಂದಿದ್ದರು. ಆದರೆ, ಕೊರೊನಾದಿಂದ ಮನೋರಂಜನ್ ಸಿನಿಮಾ ಮುಂದಕ್ಕೆ ಹೋಗಿತ್ತು. ಹೀಗಾಗಿ ಮದುವೆಯನ್ನೂ ಮುಂದೂಡಿದ್ದರು ಎಂದು ಆಪ್ತವಲಯ ಹೇಳುತ್ತಿದೆ.

ಮೊದಲ ಪುತ್ರನ ಮದುವೆಗೆ ಸಿದ್ಧತೆ

ಎರಡು ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅದ್ದೂರಿಯಾಗಿ ಪುತ್ರಿ ಗೀತಾಂಜಲಿ ಮದುವೆ ಮಾಡಿದ್ದರು. ಮಂಟಪದಿಂದ ಹಿಡಿದು ಪ್ರತಿಯೊಂದು ಕ್ರೇಜಿಸ್ಟಾರ್ ಕಲ್ಪನೆಯಲ್ಲಿಯೇ ಸಿಂಗಾರಗೊಂಡಿತ್ತು. ಇದೀಗ ಮೊದಲ ಪುತ್ರ ಮನೋರಂಜನ್‌ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಎಲ್ಲಾ ಸರಿಯಾಗಿದ್ದಿದ್ದರೆ 2021ರಲ್ಲಿ ಮನೋರಂಜನ್ ದಾಂಪತ್ಯಕ್ಕೆ ಕಾಲಿಡುತ್ತಿದ್ದರು. ಆದರೆ, ಸಿನಿಮಾ ಕಮಿಟ್ಮೆಂಟ್‌ನಿಂದ ಇದು ಸಾಧ್ಯವಾಗಿರಲಿಲ್ಲ. ತಮ್ಮನ ಸಿನಿಮಾ ಬಿಡುಗಡೆ ಬಳಿಕ ಮದುವೆ ಗ್ಯಾರಂಟಿ.

‘ತ್ರಿವಿಕ್ರಮ್’ ಸಿನಿಮಾ ರಿಲೀಸ್‌ಗೆ ಸಿದ್ಧತೆ

ರವಿಚಂದ್ರನ್‌ಗೆ ಈ ವರ್ಷ ಡಬಲ್ ಸಂಭ್ರಮ. ಮೊದಲನೆಯದು ಮೊದಲನೇ ಪುತ್ರ ಮನೋರಂಜನ್ ಮದುವೆ. ಇನ್ನೊಂದು ಎರಡನೇ ಪುತ್ರ ವಿಕ್ರಮ್ ಸ್ಯಾಂಡಲ್‌ವುಡ್ ಎಂಟ್ರಿ. ಹೌದು.. ವಿಕ್ರಮ್ ಅಭಿನಯದ ಮೊದಲ ಸಿನಿಮಾ ‘ತ್ರಿವಿಕ್ರಮ್’ ಬಿಡುಗಡೆ ಸಜ್ಜಾಗುತ್ತಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಇಬ್ಬರೂ ಮಕ್ಕಳೂ ಈ ವರ್ಷ ತಂದೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನ ಮೃತ ತಂದೆಯ 40 ವರ್ಷದ ಸಾಲವನ್ನು ಮರುಪಾವತಿಸಲು ಕೇರಳದ ವ್ಯಕ್ತಿಯ ಜಾಹೀರಾತು

Fri Feb 4 , 2022
  ಕೇರಳದ ವ್ಯಕ್ತಿಯೊಬ್ಬ ತನ್ನ ದಿವಂಗತ ತಂದೆಯ 40 ವರ್ಷಗಳ ಸಾಲವನ್ನು ಮರುಪಾವತಿಸಲು ಪತ್ರಿಕೆಯಲ್ಲಿ ಜಾಹೀರಾತನ್ನು ತೆಗೆದುಕೊಂಡನು, ಆದರೆ ಅವನ ಯೋಜನೆಯು ವಿಫಲವಾಯಿತು. ಕೊಲ್ಲಂನ ಲೂಯಿಸ್‌ಗಾಗಿ ನಾಸರ್ ಪತ್ರಿಕೆಯಲ್ಲಿ ಜಾಹೀರಾತು ನೀಡಿದರು. ಸ್ಪಷ್ಟವಾಗಿ, ನಾಜರ್ನ ತಂದೆ ಲೂಯಿಸ್ಗೆ ಸಾಲವನ್ನು ನೀಡಬೇಕಾಗಿತ್ತು ಮತ್ತು ಅವನ ಮರಣಶಯ್ಯೆಯಲ್ಲಿ ಅವನಿಗೆ ಅದನ್ನು ಬಹಿರಂಗಪಡಿಸಿದನು. ಈ ಘಟನೆಯು 1980 ರ ದಶಕದ ಹಿಂದಿನದು ಮತ್ತು ದುಬೈನಲ್ಲಿ ನಡೆದಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಮದನ್‌ವಿಲಾದ ಅಬ್ದುಲ್ಲಾ, ಬದುಕಲು […]

Advertisement

Wordpress Social Share Plugin powered by Ultimatelysocial