ಕಂದಾಯ ಅದಾಲತ್ ಕಾರ್ಯಕ್ರಮ-ತಹಶೀಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮ

ಹೊಳೆನರಸೀಪುರ ತಹಸೀಲ್ದಾರ್ ಕೆ. ಆರ್. ಶ್ರೀನಿವಾಸ್ ರವರು ಹಳ್ಳಿ ಮೈಸೂರು ಹೋಬಳಿಯ ಕಡವಿನ ಬಾಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಪೌತಿ ಖಾತೆ ಮಾಡಿಸುವುದು, ಸ್ಮಶಾನ ಒತ್ತುವರಿ ಬಿಡಿಸುವುದು, ಪಿಂಚಣಿ ಮಂಜೂರಿ ಮತ್ತು ಹೇಮಾವತಿ ನೀರಾವರಿ ಯೋಜನೆಯಡಿ ಸ್ಥಳಾಂತರಗೊಂಡ ಗ್ರಾಮಕ್ಕೆ ಹಕ್ಕುಪತ್ರ ಕೊಡಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಗ್ರಾಮದಲ್ಲಿ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್ ನಲ್ಲಿ ಹೆಚ್ಚು ನೀರು ನಿಲ್ಲುತ್ತಿದ್ದು ಈ ಸಮಸ್ಯೆಯನ್ನು ಸರಿಪಡಿಸಲು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಸ್ಯೆ ಬಗೆಹರಿಸಲು ತಿಳಿಸಲಾಯಿತು. ಇದೇ ವೇಳೆ  ಕೋವಿಡ್ -19 ಸಂಬಂಧ ಕೊರೋನಾ ಪರೀಕ್ಷೆಗಳನ್ನು ಹೆಚ್ಚು ನಡೆಸಲು ಗ್ರಾಮಸ್ಥರಲ್ಲಿ ಮನವಿ ಮಾಡಲಾಯಿತು.

 

 

 

Please follow and like us:

Leave a Reply

Your email address will not be published. Required fields are marked *

Next Post

ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್

Wed Oct 28 , 2020
ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.ಈ ಗ್ಯಾಂಗ್ ಶ್ರೀಮಂತ ವ್ಯಕ್ತಿಗಳನ್ನ ಟಾರ್ಗೇಟ್ ಮಾಡಿ ಖೆಡ್ಡಾಗೆ ಕೆಡವುತ್ತಿದ್ದರು. ಹೀಗಾಗಿ ಮಹದೇವಪುರ ಪೊಲೀಸರಿಂದ ಏಳು ಆರೋಪಿಗಳು ಸೆರೆಯಾದರು. ಪೈ ಲೇಔಟ್ ನ ವೇಶ್ಯಾವಾಟಿಕೆ ಅಡ್ಡೆಗೆ ಆಹ್ವಾನಿಸಿ ಆರೋಪಿಗಳು ವಿಡಿಯೋವನ್ನು  ಮಾಡ್ತಿದ್ದು, ಬಳಿಕ ಯುವತಿ ಪತಿ ಹಾಗೂ ಸ್ನೇಹಿತರಂತೆ ಮನೆಗೆ ನುಗ್ಗಿ ಹೈಡ್ರಾಮ ನಡೆಸಿದರು. ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಳಿಕ ಮಾನವ […]

Advertisement

Wordpress Social Share Plugin powered by Ultimatelysocial