ತಾಲ್ಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆರ್ಶೀವಾದಟ್ರಸ್ಟ್ ಹಾಗೂ ಬೆಂಗಳೂರಿನ ವೈದೇಹಿ ಮತ್ತು ಸಂಜೀವಿನಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ “ಕಣ್ಣು ಬಹುಮುಖ್ಯ ಅಂಗ ಯಾದಗಿರಿ ಜಿಲ್ಲೆ, ಶಹಪುರ್ ತಾಲೂಕಿನ, ಉಕ್ಕಿನಾಳ ಗ್ರಾಮ ವ್ಯಕ್ತಿಗೆ ನೇತ್ರ ಬಹುಮುಖ್ಯ ಅಂಗ, ಯಾರು ಅದರ ಬಗ್ಗೆ ನಿಷ್ಕಾಳಜಿ ವಹಿಸಬಾರದು. ನೇತ್ರದ ಸಮಸ್ಯೆಯಿದ್ದರೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಬಿಜೆಪಿ ಮುಖಂಡ ಡಾ.ವೀರಭದ್ರಪ್ಪ ಹೊಸಮನಿ ತಿಳಿಸಿದರು.ಗ್ರಾಮೀಣ ಪ್ರದೇಶದ ಬಡ ಜನತೆಗೆ ಉಚಿತ ಆರೋಗ್ಯ ಶಿಬಿರ ತುಂಬಾ ನೆರವಾಗಲಿದೆ. ರಾಜ್ಯದ ಬಿಜೆಪಿ ಸರ್ಕಾರವು ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಶಿಬಿರದ ಜತೆಗೆ ಅಗತ್ಯವೆನೆಸಿದರೆ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಆರ್ಶೀವಾದ ಟ್ರಸ್ಟ್ ಅಡಿಯಲ್ಲಿ ನೆರವೇರಿಸಲಾಗುವುದು ಎಂದು ಅವರು ಅಭಯ ನೀಡಿದರು.ಶಿಬಿರದಲ್ಲಿ 300ಕ್ಕೂಹೆಚ್ಚು ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು. ಬಿಜೆಪಿ ಹಿರಿಯ ಮುಖಂಡ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಯಲ್ಲಯ್ಯ ನಾಯಕ ವನದುರ್ಗ, ಗ್ರಾ.ಪಂ.ಅಧ್ಯಕ್ಷೆ ಭೀಮಾಬಾಯಿ, ಶಿವರಾಜ ಅಂಗಡಿ, ರಾಜಶೇಖರಗೌಡ, ಮಲ್ಲಿಕಾರ್ಜುನ, ಬಸವರಾಜ ಬಡಿಗೇರ, ಸಂಗಪ್ಪ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada