ಹೈದರಾಬಾದ್:ರಾಜ್ಯ ಸರ್ಕಾರವು ಚಲನಚಿತ್ರ ಟಿಕೆಟ್ ದರವನ್ನು( tickets rate) ಕಡಿತಗೊಳಿಸಿದ ನಂತರ ಆಂಧ್ರಪ್ರದೇಶದಾದ್ಯಂತ ಇದುವರೆಗೆ 185 ಚಿತ್ರಮಂದಿರಗಳನ್ನು (theatre)ಮುಚ್ಚಲಾಗಿದೆ ಎಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರದರ್ಶಕರ ವಲಯದ ಅಧ್ಯಕ್ಷ ಟಿ.ಎಸ್.
ರಾಮಪ್ರಸಾದ್ ತಿಳಿಸಿದರು.58 ಚಿತ್ರಮಂದಿರಗಳು(theatre) ಕೃಷ್ಣಾ ಜಿಲ್ಲೆಯಿಂದ, 57 ಪೂರ್ವ ಗೋದಾವರಿ ಮತ್ತು ಉಳಿದ 70 ಚಿತ್ರಮಂದಿರಗಳು ಇತರ ಜಿಲ್ಲೆಗಳಿಂದ ಬಂದಿವೆ ಎಂದರು.
ಕಾಕಿನಾಡದ ಶ್ರೀಲಕ್ಷ್ಮಿ ಥಿಯೇಟರ್ ಮಾಲೀಕ ಪಿ.ಶ್ರೀನಿವಾಸ ರಾವ್ ಮಾತನಾಡಿ, ‘ಬಿ ಅಥವಾ ಸಿ ಸೆಂಟರ್ ನಲ್ಲಿರುವ ಚಿತ್ರಮಂದಿರಕ್ಕೆ ನೌಕರರಿಗೆ ವೇತನ, ವಿದ್ಯುತ್ ಶುಲ್ಕ ಸೇರಿದಂತೆ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ ₹ 3 ಲಕ್ಷ ಬೇಕಾಗುತ್ತದೆ. ಈಗಿನ ಸರ್ಕಾರದ ಆದೇಶದಂತೆ ಚಿತ್ರಮಂದಿರಗಳು ಪ್ರತಿ ಟಿಕೆಟ್ಗೆ ₹ 5, ₹ 10, ₹ 15 ಮತ್ತು ₹ 20 ರ ಟಿಕೆಟ್ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರೆ, ತಿಂಗಳ ಸರಾಸರಿ ಆದಾಯ ₹ 35,000 ಆಗಿರುತ್ತದೆ. ಇದರಿಂದಾಗಿ ಥಿಯೇಟರ್ ಮ್ಯಾನೇಜ್ಮೆಂಟ್ಗಳಿಗೆ ಅವುಗಳನ್ನು ಮುಚ್ಚದೆ ಬೇರೆ ದಾರಿಯಿಲ್ಲ. ಚಿತ್ರಮಂದಿರಗಳು ಉಳಿಯಲು ಹಳ್ಳಿಗಳಲ್ಲಿಯೂ ರಾಜ್ಯ ಸರ್ಕಾರ ಕನಿಷ್ಠ ₹ 100 ಟಿಕೆಟ್ ದರವನ್ನು ನಿಗದಿಪಡಿಸಬೇಕು ‘ ಎಂದು ಶ್ರೀನಿವಾಸ ರಾವ್ ಸಮರ್ಥಿಸಿಕೊಂಡರು.
ಹೊಸ ಟಿಕೆಟ್ ದರ ವ್ಯವಸ್ಥೆಯಿಂದ ಪಟ್ಟಣ ಮತ್ತು ನಗರಗಳಲ್ಲಿನ ಚಿತ್ರಮಂದಿರಗಳಿಗೆ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವೈಜಾಗ್ನ ಕಿನ್ನೇರ ಥಿಯೇಟರ್ಗಳ ಮಾಲೀಕ ತೇರ್ಲ ಸಾಂಬಮೂರ್ತಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಭವಿಷ್ಯದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದು ತಮಗೆ ತಿಳಿದಿಲ್ಲ ಎಂದರು. ವಿಜಯವಾಡದ ಚಲನಚಿತ್ರ ಮಂದಿರದ ಮಾಲೀಕರು ಥಿಯೇಟರ್ಗಳನ್ನು ನಡೆಸುವುದು ಋತುಮಾನದ ವ್ಯವಹಾರವಾಗಿದೆ ಎಂದು ಹೇಳಿದರು. ಹಬ್ಬ ಹರಿದಿನಗಳು, ಬೇಸಿಗೆ ರಜೆ ಮುಂತಾದವುಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಪ್ರದರ್ಶಿಸುವ ಮೂಲಕ ಮಾತ್ರ ಅವರು ತಮ್ಮ ವಾರ್ಷಿಕ ಖರ್ಚುಗಳನ್ನು ನಿರ್ವಹಿಸಬಹುದು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: