ಹೊಸದಿಲ್ಲಿ: ವಿವಾದಿತ ಪೌರತ್ವ ಕಾನೂನಿನ ವಿರುದ್ಧದ ಬೃಹತ್ ಪ್ರತಿಭಟನೆ ನಡೆಸಿದ್ದ ಕೇಂದ್ರವಾದ ಶಾಹೀನ್ ಬಾಗ್ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಇಂದು ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲು ಸಿದ್ಧವಾಗಿದೆ ಎಂದು ndtv.com ವರದಿ ಮಾಡಿದೆ.
ಸ್ಥಳಕ್ಕೆ ಬುಲ್ಡೋಝರ್ ಗಳು ಈಗಾಗಲೇ ಆಗಮಿಸಿವೆ.
ಈ ಮೊದಲು ಶುಕ್ರವಾರ ನಡೆಯಬೇಕಿದ್ದ ಕಾರ್ಯಾಚಾರಣೆಯು ಸೂಕ್ತ ಭದ್ರತಾ ಪಡೆಯ ಅಲಭ್ಯತೆಯಿಂದಾಗಿ ರದ್ದಾಗಿತ್ತು. ಇಂದು ಬೆಳಗ್ಗೆ ದಿಲ್ಲಿ ಪೊಲೀಸರು ಧ್ವಂಸ ಕಾರ್ಯಾಚರಣೆಗೆ ಸ್ಥಳದಲ್ಲಿ ಸೂಕ್ತ ಬಲವನ್ನು ಒದಗಿಸಿದ್ದು ಒದಗಿಸಿದ್ದು, ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada