ಅತೀಂದ್ರಿಯ ಶಕ್ತಿ ಸಿದ್ಧಿಗಾಗಿ ‘ಮಾಂತ್ರಿಕ ಗುರು’ವನ್ನೇ ಕೊಂದು ರಕ್ತ ಕುಡಿದ ‘ಶಿಷ್ಯ’

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅತೀಂದ್ರಿಯ ಶಕ್ತಿಯ ಸಿದ್ಧಿಗಾಗಿ ಶಿಷ್ಯನೊಬ್ಬ ತನ್ನ ಮಾಂತ್ರಿಕ ಗುರುವನ್ನೇ ಕೊಂದು ರಕ್ತ ಕುಡಿದಿದ್ದಾನೆ.

ರೌನಕ್ ಸಿಂಗ್ ಛಾಬ್ರಾ ಅಲಿಯಾಸ್ ಮಾನ್ಯ ಚಾವ್ಲಾ (25), ಬಸಂತ್ ಸಾಹು (50) ಎಂಬ ಮಾಂತ್ರಿಕನಿಂದ ಮಾಂತ್ರಿಕ ಆಚರಣೆಗಳನ್ನ ಕಲಿಯುತ್ತಿದ್ದನು.

ಮಾಂತ್ರಿಕನನ್ನ ಮಾಂತ್ರಿಕ ಪೂಜೆಯ ಸಮಯದಲ್ಲಿ ಕೊಂದು ರಕ್ತವನ್ನ ಕುಡಿದರೆ, ಅತೀಂದ್ರಿಯ ಶಕ್ತಿಗಳನ್ನ ಪಡೆಯಬಹುದು ಎಂದು ಮಾನ್ಯ ಚಾವ್ಲಾ ಬಾವಿಸಿದ್ದು, ತನ್ನ ಗುರು ಮಾಂತ್ರಿಕ ಆಚರಣೆಗಳಲ್ಲಿ ತೊಡಗಿದ್ದಾಗ ಆತನ ಮೇಲೆ ದಾಳಿ ಮಾಡಿ ಕೊಂದಿದ್ದಾನೆ. ನಂತ್ರ ಆತನ ರಕ್ತವನ್ನ ಕುಡಿದು, ಮಾಂತ್ರಿಕನ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ.

ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಬಿದ್ದಿರುವುದನ್ನ ಗಮನಿಸಿದ ಸ್ಥಳೀಯರು ಈ ವಿಷಯವನ್ನ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅವ್ರು ಸ್ಥಳಕ್ಕೆ ಧಾವಿಸಿ ಸುಟ್ಟ ದೇಹವನ್ನ ವಶಪಡಿಸಿಕೊಂಡಿದ್ದಾರೆ.

ಅಂದ್ಹಾಗೆ, ಈ ಅವಧಿಯಲ್ಲಿಯೂ ಜನ ಮೂಢನಂಬಿಕೆಗಳನ್ನ ಇನ್ನೂ ನಂಬುತ್ತಿದ್ದು, ಅತೀಂದ್ರಿಯ ಪೂಜೆಯನ್ನ ಆಚರಿಸುತ್ತಿರುವುದು ಹಲವಡೆ ಕಂಡು ಬರ್ತಿದೆ. ಈ ರೀತಿಯ ಅನಾಗರಿಕ, ಮೃಗೀಯ ರೀತಿಯ ವರ್ತನೆಗಳು ನಿಜಕ್ಕೂ ವಿಪರ್ಯಾಸವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಜಾರ್ಖಂಡ್ ಸರ್ಕಾರ' ದೇಶದ ಅತ್ಯಂತ ಭ್ರಷ್ಟ ಸರ್ಕಾರ, ಜನರು ಅದನ್ನು ಕಿತ್ತು ಹಾಕುತ್ತಾರೆ: ಅಮಿತ್ ಶಾ

Sat Feb 4 , 2023
ನವದೆಹಲಿ : ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ , 5 ವರ್ಷಗಳಲ್ಲಿ 2 ಲಕ್ಷ ಬಹು ಆಯಾಮದ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳನ್ನು (ಪಿಎಸಿ) ನೋಂದಾಯಿಸಲು ದೊಡ್ಡ ಮೊತ್ತವನ್ನು ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಂದು ಅಮಿತ್ ಶಾ ಅವರು ಜಾರ್ಖಂಡ್‌ನ ದಿಯೋಘರ್‌ಗೆ ಭೇಟಿ ನೀಡಿ ಇಫ್ಕೋದ ನ್ಯಾನೋ ಯೂರಿಯಾ ಸ್ಥಾವರದ ಶಂಕುಸ್ಥಾಪನೆ ನೆರವೇರಿಸಿ, ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾನೋ ಯೂರಿಯಾವು […]

Advertisement

Wordpress Social Share Plugin powered by Ultimatelysocial