ಶಿವಮೊಗ್ಗ : ಕುಶಲಕರ್ಮಿಗಳಾದ ಕುಂಬಾರ/ಟೆರಾಕೋಟ/ಮಣ್ಣಿನ ವಿಗ್ರಹ, ಕಮ್ಮಾರ, ಬಡಗಿ, ಶಿಲ್ಪಿಗಳು, ಬುಟ್ಟಿ ಹೆಣೆಯುವವರು, ಆಭರಣ ತಯಾರಿಸುವ ಅಕ್ಕಸಾಲಿಗರು, ಶ್ರೀಗಂಧದ ಕೆತ್ತನೆ, ಕಲ್ಲಿನ ಕೆತ್ತೆ, ಲೋಹದ ಕರಕುಶಲ ವಸ್ತು, ಬೆತ್ತ ಮತ್ತು ಬಿದಿರಿನ ಕೆಲಸ, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಸೆಲ್ ಕ್ರಾಫ್ಟ್, ಕಂಬಳಿ ನೇಯುವವರು, ಚಾಪೆ ಹೆಣೆಯುವವರು, ಕರಕುಶಲ ವಸ್ತುಗಳನ್ನು ತಯಾರಿಸುವ ಜಿಲ್ಲೆಯ ಕುಶಲಕರ್ಮಿಗಳಿಂದ ಅವರ ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಬ್ಯಾಂಕಿನ ಸಾಲದೊಂದಿಗೆ ಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಎಂಬ ಹೊಸ ಯೋಜನೆಯಡಿ ಅರ್ಜಿಯನ್ನು ಅಹ್ವಾನಿಸಲಾಗಿದೆ.
ಈ ಯೋಜನೆಯಡಿ ಮಂಜೂರಾದ ಸಾಲದ ಶೇ. 30 ರಷ್ಟು ಗರಿಷ್ಟ ರೂ. 15,000/- ಸಹಾಯಧನವನ್ನು ಯೋಜನಾ ವೆಚ್ಚವು ರೂ. 50,000/- ಮೀರದಿರುವ ಚಟುವಟಿಕೆಗಳಿಗೆ ನೀಡಲಾವುದು. ಅರ್ಜಿ ಸಲ್ಲಿಸಲು ಜ.25 ಅಂತಿಮ ದಿನಾಂಕವಾಗಿರುತ್ತದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ದೂ.ಸಂ.: 08182-222802 ಹಾಗೂ ಎಲ್ಲಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
https://play.google.com/store/apps/details?id=com.speed.newskannada