ಡಿನ್ನರ್ ಡೇಟ್ ಸಂದರ್ಭದ ವಿಡಿಯೋ ವೈರಲ್ರಾಕೇಶ್​ಗೆ ಶಮಿತಾ ಪ್ರೀತಿಯ ಮುತ್ತು.

 

 

ಶಮಿತಾ ಹಾಗೂ ರಾಕೇಶ್ ಈಗಾಗಲೇ ಜತೆಯಾಗಿ ಓಡಾಡುತ್ತಿದ್ದಾರೆ. ಇಂದು ಶಮಿತಾ ಜನ್ಮದಿನ. ಜತೆಯಾಗಿ ಈರ್ವರೂ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ಮುಂಬೈ: ‘ಬಿಗ್​ ಬಾಸ್ 15’ರಲ್ಲಿ ಕಾಣಿಸಿಕೊಂಡಿದ್ದ ಶಮಿತಾ ಶೆಟ್ಟಿಪ್ರಶಸ್ತಿ ಗೆಲ್ಲದೇ ಹೋದರೂ ಕೂಡ ಅಪಾರ ಅಭಿಮಾನಿ ಬೆಂಬಲವನ್ನು ಗಳಿಸಿ ಹೊರಬಂದಿದ್ದಾರೆ.ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡಾಗ ಪರಿಚಯವಾಗಿದ್ದ ಮತ್ತೋರ್ವ ಸ್ಪರ್ಧಿ ರಾಕೇಶ್ ಬಾಪಟ್   ಜತೆ ಶಮಿತಾ ಸ್ನೇಹವೂ ಕುದುರಿದೆ. ಅರ್ಥಾತ್ ಇದು ಸ್ನೇಹಕ್ಕಿಂತಲೂ ತುಸು ಹೆಚ್ಚೇ ಎನ್ನುಬಹುದು. ಇದಕ್ಕೆ ಪುಷ್ಠಿ ನೀಡುವಂತೆ ಶಮಿತಾ ಹಾಗೂ ರಾಕೇಶ್ ತಮ್ಮೀರ್ವರ ನಡುವೆ ಸ್ನೇಹಕ್ಕೂ ಮಿಗಿಲಾದ ಬಂಧವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಂದು ಶಮಿತಾ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಕೇಶ್ ಹಾಗೂ ಶಮಿತಾ ಜತೆಯಾಗಿ ಕಾಣಿಸಿಕೊಂಡಿರುವುದಲ್ಲದೇ ಜನ್ಮದಿನದ ವಿಶೇಷ ಡೇಟ್​ಗೂ ಹೋಗಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ರಾಕೇಶ್ ಬಾಪಟ್ ಹಂಚಿಕೊಂಡಿದ್ದು, ವೈರಲ್ ಆಗಿವೆ.ಈ ಹಿಂದೆ ಜತೆಯಾಗಿ ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಸಖತ್ ಪೋಸ್ ನೀಡಿದ್ದ ಶಮಿತಾ ಹಾಗೂ ರಾಕೇಶ್, ಮೊದಲು ಈರ್ವರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು. ಈ ಮೂಲಕ ಅಡ್ಡಗೋಡೆಯ ದೀಪವಿರಿಸುವಂತೆ ಹೇಳಿಕೆ ನೀಡಿದ್ದರು. ಇದೀಗ ಬಿಗ್ ಬಾಸ್​ ಫೈನಲ್​ವರೆಗೆ ತಲುಪಿದ್ದ ಶಮಿತಾ ರಾಕೇಶ್ ಜತೆ ಭರ್ಜರಿಯಾಗಿ ಜನ್ಮದಿನವನ್ನು ಆಚರಿಸಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟಿರುವ ಶಮಿತಾಗೆ ‘ಹ್ಯಾಪಿ ಬರ್ಥ್​ಡೆ ಲವ್’ ಎಂದು ಬರೆದು ಪೋಸ್ಟ್ ಶೇರ್ ಮಾಡಿರುವ ರಾಕೇಶ್ ಶುಭಾಶಯ ಕೋರಿದ್ದಾರೆ.ವಿಶೇಷವೆಂದರೆ ರಾಕೇಶ್ ಶಮಿತಾರನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇದಲ್ಲದೇ ಈರ್ವರೂ ಆಲಂಗಿಸಿಕೊಂಡಿರುವ ಚಿತ್ರಗಳೂ ಅಭಿಮಾನಿ ಖಾತೆಗಳಲ್ಲಿ ವೈರಲ್ ಆಗಿವೆ. ಹುಟ್ಟುಹಬ್ಬವನ್ನು ರಾಕೇಶ್ ಜತೆ ಪಾರ್ಟಿಯಲ್ಲಿ ಭಾಗವಹಿಸುವ ಮೂಲಕ ಶಮಿತಾ ಆಚರಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಇವಾಗಿವೆ.ಶಮಿತಾ ಹಾಗೂ ರಾಕೇಶ್ ತಮ್ಮ ಡೇಟ್ ಸಂದರ್ಭದಲ್ಲಿ ಪಾಪರಾಜಿಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ. ಅಲ್ಲದೇ ಈರ್ವರೂ ಆಲಂಗಿಸಿಕೊಂಡು ಕಿಸ್ ಮಾಡಿದ್ದಾರೆ. ಈ ಮೂಲಕ ತಾವೀರ್ವರೂ ಮತ್ತಷ್ಟು ಹತ್ತಿರವಾಗಿರುವುದನ್ನು ಸಾರಿದ್ದಾರೆ. ಅಭಿಮಾನಿಗಳು ಸೇರಿದಂತೆ ಖ್ಯಾತ ತಾರೆಯರು ಈ ಚಿತ್ರಗಳಿಗೆ ಕಾಮೆಂಟ್ ಮಾಡಿದ್ದು, ಶಮಿತಾಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ ಐ ನೇಮಕಾತಿಯ ಆಯ್ಕೆ ಪಟ್ಟಿ ರದ್ಧತಿಗೆ ವಂಚಿತ ಆಕಾಂಕ್ಷಿಗಳ ಆಗ್ರಹ

Thu Feb 3 , 2022
  ಕಲಬುರಗಿ: ಇತ್ತೀಚೆಗೆ ಬಿಡುಗಡೆಯಾದ 545 ಪಿಎಸ್ ಐ ಹುದ್ದೆಗಳ ತಾತ್ಕಾಲಿಕ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಆಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 371 (ಜೆ) ಅಡಿ 2016ರಲ್ಲಿ ಹೊರಡಿಸಿದ ಸುತ್ತೋಲೆಯಂತೆ ಮೀಸಲಾತಿ ನೀಡಬೇಕಿತ್ತು. ಪಿಎಸ್ ಐ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ರಾಜ್ಯ ವ್ಯಾಪ್ತಿ ಪಟ್ಟಿಯಲ್ಲಿ ಪರಿಗಣಿಸಿ, ಉಳಿದ […]

Advertisement

Wordpress Social Share Plugin powered by Ultimatelysocial