ಸಾರ್ವಜನಿಕ ಅಗತ್ಯವಾಗಿ ಬೇಕಾಗಿದ್ದ ಸ್ಮಾಶಾನ ಭೂಮಿ ಮಂಜೂರು ಮಾಡಿಸಿ ಹಸ್ತಾಂತರ ಮಾಡುವ ಮೂಲಕ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಮಾಜದಿಂದ ಶ್ಲಾಘನೆಗೆ ಒಳಗಾದರು.ಬಹು ದಿನಗಳಿಂದ ಕಾಗವಾಡ ತಾಲೂಕಿನ ಶೇಡಬಾಳ ವ್ಯಾಪ್ತಿಯ ಪರಮೇಶ್ವರವಾಡಿ ಗ್ರಾಮದಲ್ಲಿ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದ ಸಾರ್ವಜನಿಕ ರುದ್ರ ಭೂಮಿಯ ಬೇಡಿಕೆಯನ್ನು ಮಣ್ಣಿಸಿ ಸರ್ಕಾರದ ಅನುದಾನದಲ್ಲಿ ಸುಮಾರು ಒಂದು ಎಕರೆ ಮೂವತ್ತಾರು ಗುಂಟೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಿಸಿ ಹಸ್ತಾಂತರಿಸಿದ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಮನುಷ್ಯನ ಜೀವನ ನಶ್ವರವಾಗಿದ್ದು ಜಗತ್ತಿನಲ್ಲಿ ಜನಿಸಿದ ಎಲ್ಲ ಜೀವಿಗಳಿಗೂ ಸಾವು ನಿಶ್ಚಿತವಾಗಿದೆ.ಸ್ಮಶಾನ ಭೂಮಿಯು ಪವಿತ್ರವಾದ ಜಾಗವಾಗಿದ್ದು ಮನುಷ್ಯನ ಸಾವಿನ ಬಳಿಕ ನಡೆಯುವ ಕ್ರಿಯಾವಿಧಿಗಳನ್ನು ಪೂರೈಸುವ ಕೇಂದ್ರವಾಗಿದೆ ಸಾರ್ವಜನಿಕರಿಗೆ ಬಹುದಿನಗಳ ಬೇಡಿಕೆಯನ್ನು ಅರಿತು ಸರ್ಕಾರ ಮಟ್ಟದಲ್ಲಿ ಭೂಮಿ ಮಂಜೂರು ಮಾಡಿಸುವ ಕೆಲಸವನ್ನು ಮಾಡಿದ್ದೇನೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: