ಪ್ರಜಾ ಧ್ವನಿ ಬಸ್ ಯಾತ್ರೆ ಹಿನ್ನಲೆಯಲ್ಲಿ ಹುಬ್ಬಳ್ಳಿಗೆ ವಾಸ್ತವ್ಯಕ್ಕೆಂದು ಮಧ್ಯರಾತ್ರಿ ಬಂದ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ ತಡ ರಾತ್ರಿಯಲ್ಲೂ ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು ನಗರದ ಗಾಂಧಿವಾಡ ಕಾಲೊನಿಯಲ್ಲಿ ಇಬ್ಬರು ನಾಯಕರಿಗೆ ಕೈ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾರ್ಪೊರೇಟರ್ ಸುವರ್ಣ ಕಳ್ಳಕುಂಠಲ ನೇತೃತ್ವದಲ್ಲಿ ಕ್ರೇನ್ ಮೂಲಕ ಬೃಹತ್ ಹೂ ಮಾಲೆ ಹಾಕಿ,ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು.ಈ ವೇಳೆ ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಿ ನಮಿಸಿದ ಡಿಕೆಶಿ ಕಾರ್ಯಕರ್ತರ ಜೊತೆಗೆ ಒಂದಿಷ್ಟು ಸಮಯ ಕಾಲ ಕಳೆದರು..ಬಳಿಕ ಖಾಸಗಿ ಹೋಟೆಲ್ ನತ್ತ ತೆರಳಿದರು ಸದ್ಯ ಹುಬ್ಬಳ್ಳಿಯಲ್ಲಿರುವ ಕೈ ಮುಖಂಡರು ಬೆಳಗ್ಗೆ ಇಲ್ಲಿಂದಲೇ ಹಾವೇರಿಗೆ ಪ್ರಯಾಣ ಮಾಡಲಿದ್ದಾರೆ.
https://play.google.com/store/apps/details?id=com.speed.newskannada