ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ !

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಭಾಷಣದ ವೇಳೆ ಮಾತಿನ ಭರಾಟೆಯಲ್ಲಿ ‘ಕಾಂಗ್ರೆಸ್‌ ಮುಕ್ತ ಭಾರತ’ಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಹೇಳಿ ನಂತರ ಕ್ಷಮಿಸಿ ಬಿಜೆಪಿ ಮುಕ್ತ ಭಾರತ ಎಂದು ಹೇಳಲು ಹೋಗಿ ಕಾಂಗ್ರೆಸ್‌ ಮುಕ್ತ ಅಂದುಬಿಟ್ಟೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಆ ಮಾತು ಹೇಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡರು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳ ತೊಡಗಿದರು. ಇನ್ನೂ ಕೆಲವರು ನೇರ ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳ ಕ್ಯಾಮರಾ ಅತ್ತ ದಿಟ್ಟಿಸಿ ನೋಡಿದರು. ಕೂಡಲೇ ಸಿದ್ದರಾಮಯ್ಯ ಕ್ಷಮಿಸಿ ಅಂತಹದ್ದೇನು ತಪ್ಪಾಗಿಲ್ಲ ಎಂದು ಹೇಳಿ ಮತ್ತೆ ಮಾತು ಮುಂದುವರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವರನಾಗಲಿರುವ ರಣಬೀರ್ ಕಪೂರ್ಗೆ ಒಂದು ಮದುವೆಯ ಸಲಹೆಯನ್ನು ನೀಡಿದ್ದ,ಸಂಜಯ್ ದತ್!

Tue Apr 12 , 2022
ರಾಜ್‌ಕುಮಾರ್ ಹಿರಾನಿಯವರ ಜೀವನಾಧಾರಿತ ಸಂಜು ಚಿತ್ರದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರವನ್ನು ಚಿತ್ರಪ್ರೇಮಿಗಳು ಮತ್ತು ವಿಮರ್ಶಕರು ಇಷ್ಟಪಡುತ್ತಾರೆ. ಇದು ಸಾಮಾನ್ಯ ಜ್ಞಾನವಲ್ಲದಿದ್ದರೂ, ಸಂಜಯ್ ದತ್ ಅವರ ದೇಹ ಭಾಷೆ, ಶೈಲಿ ಮತ್ತು ವರ್ತನೆಯನ್ನು ಸಂಪೂರ್ಣವಾಗಿ ಅನುಕರಿಸಲು ರಣಬೀರ್ ಒಂದು ವರ್ಷವನ್ನು ಚಲನಚಿತ್ರದ ಚಿತ್ರೀಕರಣದಲ್ಲಿ ಹೇಗೆ ಕಳೆದಿದ್ದಾರೆ ಎಂಬುದು ಶ್ಲಾಘನೀಯವಾಗಿದೆ. ಸಂಜಯ್ ತನ್ನ ಜೀವನದುದ್ದಕ್ಕೂ ಅನುಭವಿಸಿದ ಭಾವನೆಗಳ ಸಾಕ್ಷ್ಯವನ್ನು ತೆರೆಯ ಮೇಲೆ ತಂದಾಗ ಅವರು ಬಾರ್ ಅನ್ನು ಹೆಚ್ಚಿಸಿದರು. ಕೆಜಿಎಫ್ […]

Advertisement

Wordpress Social Share Plugin powered by Ultimatelysocial